ಸ್ಪಂದನಾಸೇವಾ ಸಂಘದಿಂದ ನಿಡ್ಲೆ ದೀಪಿಕಾರಿಗೆ ಆರ್ಥಿಕ ನೆರವು

0

ನಿಡ್ಲೆ : ನಿಡ್ಲೆ ಗ್ರಾಮದ ಬರಂಗಾಯ ಮಜಲ್ ಮಾರು ನಿವಾಸಿ ಸಂಜೀವ ಗೌಡರ ಪುತ್ರಿ ಕುಮಾರಿ ದೀಪಿಕಾರಿಗೆ ಅಸ್ತಿಮಜ್ಜೆ ಶಸ್ತ್ರಚಿಕಿತ್ಸಾ ಸಹಾಯಾರ್ಥವಾಗಿ ಸ್ಪಂದನಾ ಸೇವಾ ಸಂಘದಿಂದ ರೂ. 25 ಸಾವಿರ ರೂಪಾಯಿ ಮತ್ತು ನಿಡ್ಲೆ ಗ್ರಾಮದ ನೆಡಿಲು ಗಾಣಂತಿ, ನೂಜಿಲ ಬೈಲುವಾರು ಸಮಿತಿ ವತಿಯಿಂದ ಸಂಗ್ರಹವಾದ ರೂ.5 ಸಾವಿರವನ್ನು ಒಟ್ಟು ಸೇರಿಸಿ ರೂ.30ಸಾವಿರದ ಚೆಕ್ಕನ್ನು ಸೀತಾರಾಮ ಗೌಡ ಸೌರಭ ಬೆಳಾಲು ಇವರ ಮೂಲಕ ಫಲಾನುಭವಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿ (ಲಿ.) ನಿರ್ದೇಶಕ ಸುರೇಶ್ ಕೌಡಂಗೆ, ಸ್ಪಂದನಾ ಸೇವಾ ಸಂಘದ ಸಂಚಾಲಕ ಮೋಹನ್ ಗೌಡ ಕೊಯ್ಯೂರು, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರುಗಳಾದ ಮಹಾಬಲ ಗೌಡ ಮತ್ತು ಶ್ರೀಮತಿ ಮೀನಾಕ್ಷಿ, ತಾಲೂಕು ಯುವ ಗೌಡ ವೇದಿಕೆಯ ನಿರ್ದೇಶಕ ನಿತಿನ್ ಗೌಡ ಕಲ್ಮಂಜ, ನಿಡ್ಲೆ ಗ್ರಾಮ ಸಮಿತಿಯ ಯುವ ವೇದಿಕೆಯ ಕಾರ್ಯದರ್ಶಿ ರಾಜೇಂದ್ರ ಗೌಡ ನಿಡ್ಲೆ, ಮಂಜು ನಿಡ್ಲೆ, ಲೋಕೇಶ್ ಅಣಿಯೂರು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here