ನೆತ್ತರ ಅಂಗನವಾಡಿಯಲ್ಲಿ ಸಿರಿಧಾನ್ಯಗಳ ಮಾಹಿತಿ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ

0

ಮಚ್ಚಿನ: ನೆತ್ತರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನದಡಿ ಸಿರಿಧಾನ್ಯಗಳ ಮಾಹಿತಿ ಕಾರ್ಯಕ್ರಮ ಹಾಗೂ ಅಂಗನವಾಡಿ ಮಕ್ಕಳ ಬೀಳ್ಕೊಡುವ ಕಾರ್ಯಕ್ರಮ ಮಾ.25 ರಂದು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರಾದ ರುಕ್ಮಿಣಿ ನೆತ್ತರ, ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಜ್ಯೋತಿ ಹರೀಶ್ ಮಚ್ಚಗುರಿ, ಶಾಲಾ ಮುಖ್ಯ್ಯೋಪಾಧ್ಯಯ ಸೀತಾರಾಮ ಬೆಳಾಲು, ಶಕ್ತಿ ನವೋದಯ ಸಂಘದ ಅಧ್ಯಕ್ಷೆ ಮೋಹಿನಿ ಯೋಗೀಶ್ ಮಚ್ಚಗುರಿ ಸಮಿತಿ ಸದಸ್ಯರು, ಪೋಷಕರು ಭಾಗವಹಿಸಿದರು. ಬೀಳ್ಕೊಡುತ್ತಿರುವ ಪುಟಾಣಿಗಳು ತಮ್ಮ 3 ವರ್ಷಗಳ ಅಂಗನವಾಡಿ ಅನುಭವಗಳನ್ನು ಹಂಚಿಕೊಂಡರು. ಮಕ್ಕಳು ತಮ್ಮ ಸವಿ ನೆನಪಿಗಾಗಿ ಅಂಗನವಾಡಿ ಕೇಂದ್ರಕ್ಕೆ ಮಿಕ್ಸಿ ಹಾಗೂ ಜ್ಯೂಸರ್ ನೀಡಿದರು.

ಅಂಗನವಾಡಿ ಟೀಚರ್ ಮಕ್ಕಳಿಗೆ ಕಿರು ಸ್ಮರಣಿಕೆ ನೀಡಿ ಗೌರವಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಶಿಕ್ಷಕಿ ಸ್ವಾಗತಿಸಿ , ವಂದಿಸಿದರು.

LEAVE A REPLY

Please enter your comment!
Please enter your name here