ಶ್ರಿ ಕ್ಷೇತ್ರ ಎರ್ನೋಡಿ ಉಜಿರೆ ವಷಾ೯ವಧಿ ಜಾತ್ರೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

0

ಉಜಿರೆ: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ,ಸ್ವಾಮಿ ಕೊರಗಜ್ಜ ಸನ್ನಿಧಿ, ಶ್ರಿ ಕ್ಷೇತ್ರ ಎರ್ನೋಡಿ ಉಜಿರೆಯ ಈ ವರ್ಷದ ಜಾತ್ರೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಇತ್ತೀಚೆಗೆ ಶ್ರೀ ಕ್ಷೇತ್ರ ಸಭಾಭವನದಲ್ಲಿ ನಡೆಯಿತು.
ದೈವ ನರ್ತಕರಿಗೆ ಮತ್ತು ಪಾತ್ರಿ ಯವರಿಗೆ ವೀಳ್ಯ ನೀಡುವ ಕಾರ್ಯಕ್ರಮ ನಡೆಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ರಾಮಚಂದ್ರ ಶೆಟ್ಟಿ ಉದ್ಯಮಿ ಉಜಿರೆ ಇವರು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಯು.ಬಾಬು ಮೊಗೇರ ಎರ್ನೋಡಿ, ಟ್ರಸ್ಟಿ ಗಳಾದ ಜಯಂತ ಶೆಟ್ಟಿ ಕುಂಟಿನಿ, ಮೋಹನ್ ಶೆಟ್ಟಿಗಾರ್ ಉಜಿರೆ, ಪೂವಯ್ಯ ಗೌಡ, ಅಮ್ಮು ಎರ್ನೋಡಿ, ವಿಶ್ವನಾಥ್ ಶೆಟ್ಟಿ ಪಾರ, ಬೆ.ತಾ ಮೊಗೇರ ಸಮಾಜ ಸೇವಾ ಸಮಿತಿ(ರಿ) ಎರ್ನೋಡಿ ಉಜಿರೆ ಇದರ ಅಧ್ಯಕ್ಷರಾದ ನೋಣಯ್ಯ ಪುಂಜಾಲಕಟ್ಟೆ, ದೈವಸ್ಥಾನ ಸಮಿತಿ ಸದಸ್ಯರಾದ ಪದ್ಮ ನಾಯ್ಕ ಪಾರ, ರಾಜಾರಾಮ ನೇಕಾರ, ಅಮುನ ಬಡೆಕೊಟ್ಟು ಟಿ.ಬಾಬು ತುಂಬೆದೊಟ್ಟು, ಚಲ್ಲ ಮೊಗೇರ, ಗಣೇಶ್ ಪಾರ, ಪ್ರದೀಪ್ ಎರ್ನೋಡಿ, ದಿಲೀಪ್ ಎರ್ನೋಡಿ, ರಾಜೇಶ್ ಜೋಗಿ, ಸುಜನ್ ಪಜಿರಡ್ಕ, ಸಂಜಯ್ ಪಾರ, ರಂಜಿತ್ ಪಾರ, ಗೌತಮ್ ಪಾರ, ಅಜಯ್ ಪಾರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here