ಎಕ್ಸೆಲ್ ಕಾಲೇಜಿನ ಸತ್ಯನಾರಾಯಣ ಭಟ್ ರವರಿಗೆ ಡಾಕ್ಟರೇಟ್ ಪದವಿ

0

ಗುರುವಾಯನಕೆರೆ : ಎಕ್ಸೆಲ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ ಇಲ್ಲಿನ ಭೌತ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಸತ್ಯನಾರಾಯಣ ಭಟ್ ರವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಪ್ರಾಧ್ಯಾಪಕರಾದ ಡಾ. ಆಶಾ ರಾವ್ ಅವರ ಮಾರ್ಗದರ್ಶನದಲ್ಲಿ , ಸತ್ಯ ನಾರಾಯಣ ಅವರು ಸಿದ್ಧ ಪಡಿಸಿದ ‘ ಎ ಕಂಪಾರೆಟಿವ್ ಸ್ಟಡಿ ಆನ್ ದ ರೇಡಿಯೇಷನ್ ಎಫೆಕ್ಟ್ಸ್ ಆನ್ ಮಲ್ಟಿ ಜಂಕ್ಷನ್ ಸೋಲಾರ್ ಸೆಲ್ಸ್ ‘ ಎನ್ನುವ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರಕಿದೆ.

ಬೆಂಗಳೂರಿನ ಇಸ್ರೋ ಸಂಸ್ಥೆ ಹಾಗೂ ಮುಂಬಯಿಯ ಬಾಬಾ ಆಟಮಿಕ್ ಸಂಶೋಧನಾ ಕೇಂದ್ರ ಗಳು (BARC) ಈ ಸಂಶೋಧನಾ ಕಾರ್ಯಕ್ಕೆ ಸಹಯೋಗ ನೀಡಿವೆ. ಕಳೆದ 15 ವರ್ಷಗಳಿಂದ ಉಪನ್ಯಾಸಕರಾಗಿ, ನೀಟ್ ಟ್ರೈನರ್ ಆಗಿರುವ ಸತ್ಯನಾರಾಯಣ ಭಟ್ ಅವರು ಬಂಟ್ವಾಳ ತಾಲೂಕು, ಕನ್ಯಾನ ದ ಬಳಿಯ ಪನೆಯಡ್ಕದವರಾದ ಮಹಾಲಿಂಗ ಭಟ್ ಪಿ, ಮತ್ತು ಲಕ್ಷ್ಮಿ ದಂಪತಿಗಳ ಸುಪುತ್ರ.

LEAVE A REPLY

Please enter your comment!
Please enter your name here