ಮುಂಡಾಜೆ ಸಿಎ ಬ್ಯಾಂಕ್ ನಿಂದ ಕೃಷಿ ಯಂತ್ರೋಪಕರಣ ಪ್ರಾತ್ಯಕ್ಷಿಕೆ

0

ಮುಂಡಾಜೆ: ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ರೈತ ಸೇವಾ ಕೂಟ ಹಾಗೂ ಸಾಯಾ ಎಂಟರ್ಪ್ರೈಸಸ್ ಸಹಭಾಗಿತ್ವದಲ್ಲಿ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಹುರ್ತಾಜೆ ಮಧು ಶೆಟ್ಟಿಯವರ ತೋಟದಲ್ಲಿ ಫೆ.21 ರಂದು ಜರಗಿತು.
ಅಧ್ಯಕ್ಷ ನೂಜಿ ಜನಾರ್ದನ ಗೌಡ ಕಾರ್ಯಕ್ರಮ ಉದ್ಘಾಟಿಸಿದರು.
ಅಡಿಕೆ ಸುಲಿಯುವ ಯಂತ್ರ, ಫೈಬರ್ ದೋಟಿ ಸೇರಿದಂತೆ ತೋಟದೊಳಗೆ ಕೊಂಡೊಯ್ಯಬಹುದಾದ ಸಣ್ಣ ಪ್ರಮಾಣದ ಸಾಗಾಟ ವಾಹನ ಇತ್ಯಾದಿಗಳ ಪ್ರಾತ್ಯಕ್ಷಿಕೆ ಜರಗಿತು.
ಉಪಾಧ್ಯಕ್ಷ ಪ್ರಕಾಶ ನಾರಾಯಣ ರಾವ್, ನಿರ್ದೇಶಕರಾದ ಜ್ಯೋತಿ ಜೆ ಫಡಕೆ, ಶಶಿಧರ ಬಿ, ಗಜಾನನ ವಝೆ, ಬಿ.ಎ.ರೆಹಮಾನ್, ಶ್ರೀನಿವಾಸ ರಾವ್, ರಜನೀಶ ಫಡಕೆ, ವಿಶ್ವನಾಥ ಬೆಂಡೆ, ಶ್ರೀರಂಗ ಗೋಖಲೆ, ಗೋವಿಂದ ಮರಾಠೆ, ಪ್ರಮೋದ್ ಭಿಡೆ, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.
ನಿವೃತ್ತ ಸಿಇಒ ನಾರಾಯಣ ಫಡಕೆ ಸ್ವಾಗತಿಸಿದರು.ಸಿಇಒ ಚಂದ್ರಕಾಂತ ಪ್ರಭು ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here