ಕಳೆಂಜ ಗೋಶಾಲೆಗೆ ಸಚಿವ ಶಂಕರ ಪಾಟೀಲ್ ಭೇಟಿ

0

ಕಳೆಂಜ: ಮಾನ್ಯ ಕಬ್ಬು ಅಭಿವೃದ್ಧಿ, ಜವಳಿ ಮತ್ತು ಸಕ್ಕರೆ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ ಇವರು, ನಂದಗೋಕುಲ ಗೋಶಾಲೆಗೆ ಭೇಟಿ ನೀಡಿ, ಗೋಶಾಲೆ ಬಗ್ಗೆ ಮಾಹಿತಿ ಪಡೆದರು.

ಗೋಶಾಲೆ ಚಟುವಟಿಕೆ ಮತ್ತು ಕಾರ್ಯವೈಖರಿ ತಿಳಿದು ಸಂತಸ ವ್ಯಕ್ತ ಪಡಿಸಿದರು. ವೈಯಕ್ತಿಕವಾಗಿಯೂ ಮತ್ತು ತಮ್ಮ ಇಲಾಖೆ/ ಸರ್ಕಾರದಿಂದ ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಮ್ಮ ಟ್ರಸ್ಟಿನ ಅಧ್ಯಕ್ಷರಾದ ಡಾ. ಎಂ. ಎಂ ದಯಾಕರ್, ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಟ್ರಸ್ಟಿ ನವೀನ್ ನೆರಿಯ, ಶ್ರೀ ರಮೇಶ್ ಪ್ರಭು ಕಲೆಂಜ ಪಂಚಾಯತ್ ಅಧ್ಯಕ್ಷರಾದ ಶ್ರೀ ಪ್ರಸನ್ನ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮನೆಜರ್ ಗಳಾದ ಕೀರ್ತಿರಾಜ್ ಮತ್ತು ಶ್ರೀಶ ಭಟ್ ಅವರನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here