ವಿಶ್ರಾಂತ ಪತ್ರಕರ್ತ ಶ್ರೀಕರ ಮರಾಠೆಗೆ ಜೀವಮಾನ ಸಾಧನಾ ಪ್ರಶಸ್ತಿ

0

ಮುಂಡಾಜೆ :ಮುಂಡಾಜೆ ನಿವಾಸಿ ವಿಶ್ರಾಂತ ಪತ್ರಕರ್ತ ಶ್ರೀಕರ ಮರಾಠೆಯವರಿಗೆ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ತೃತೀಯ ವರ್ಷದ ಸಂಸ್ಮರಣಾರ್ಥವಾಗಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಡಿ. 29ರಂದು ಮಂಗಳೂರಿನಲ್ಲಿ ಜರಗಿದ ಪೇಜಾವರ ‘ವಿಶ್ವೇಶತೀರ್ಥ ನಮನ’ ಕಾರ್ಯಕ್ರಮದಲ್ಲಿ ಜೀವಮಾನ ಸಾಧನಾ ಪ್ರಶಸ್ತಿಯನ್ನು ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪ್ರದಾನ ಮಾಡಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು. ಕಾರ್ಕಳದ ಈದು ಗ್ರಾಮದವರಾದ ಶ್ರೀಕರ ಮರಾಠೆಯವರು ನಾಡಿನ ಹಲವಾರು ಪತ್ರಿಕೆಗಳಲ್ಲಿ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಮುಂಡಾಜೆಯ ಮಜಲುವಿನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here