ರಕ್ತೇಶ್ವರಿಪದವು ಭಜನಾ ಮಂಡಳಿ ವಾರ್ಷಿಕೋತ್ಸವ,ಗಣಹೋಮ,ಸತ್ಯ ನಾರಾಯಣ ಪೂಜೆ

0


ನ್ಯಾಯತರ್ಪು : ರಕ್ತೇಶ್ವರಿಪದವು ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ (ರಿ) ವಾರ್ಷಿಕೋತ್ಸವ, ಗಣಹೋಮ, ಸತ್ಯ ನಾರಾಯಣ ಪೂಜೆ ಮತ್ತು ಭಜನಾ ಕಾರ್ಯಕ್ರಮ ಡಿ.25 ರಂದು ಭಜನಾ ಮಂಡಳಿ ವಠಾರದಲ್ಲಿ ಜರುಗಿತು.

ಗಣಹೋಮ,ಸಂಜೆ ಸತ್ಯ ನಾರಾಯಣ ಪೂಜೆ, ಕೊಜಪ್ಪಾಡಿ ನಾಗಶ್ರೀ ಮಂಡಳಿ ಮಕ್ಕಳ ಕುಣಿತ ಭಜನೆ, ನಾಳ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ, ಮಹಾ ಪೂಜೆ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ಭಜನಾ ಮಂಡಳಿ ಅಧ್ಯಕ್ಷ ರಂಜನ್ ಎಮ್,ಕಾರ್ಯದರ್ಶಿ ರಮೇಶ್ ಪೂಜಾರಿ, ಪದಾಧಿಕಾರಿಗಳು, ಸದಸ್ಯರು, ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರು,ನಾಳ, ಕೊಜಪಾಡಿ,ಬೊಳ್ಳುಕಲ್ಲು ಭಜನಾ ಮಂಡಳಿ ಸದಸ್ಯರು ರಕ್ತ ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಸಂತ ಕುಮಾರ್ ವಂಜಾರೆ,ಯಾದವ ಗೌಡ ಮುದ್ದುಂಜ, ಉಮೇಶ್ ಕೇಲ್ದಡ್ಕ ಸ್ವಾಗತಿಸಿ, ಧನ್ಯವಾದವಿತ್ತರು. ಭಜನಾ ಮಂಡಳಿ ಅಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸ್ಥಳೀಯ ವಿವಿಧ ಸಂಘ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

ಕೊಡುಗೆ :
ದಿ.ವಿಶ್ವನಾಥ ಪೂಜಾರಿ ಮುರತ್ತಮೇಲು ಸ್ಮರಣಾರ್ಥ 25 ಊಟದ ಸ್ಟೀಲ್ ತಟ್ಟೆಗಳನ್ನು ಹಾಗೂ ಗೇರುಕಟ್ಟೆ ಚಾಮುಂಡೇಶ್ವರಿ ಫರ್ನಿಚರ್ ಮಾಲಿಕ ಯಾದವ ರವರು ದೇವರಿಗೆ ಮರದ ಪೀಠ. ಶೇಖರ ಗೌಡ ಕಲಾಯಿತೊಟ್ಟು ಮತ್ತು ಮಧುಕರ ಕಜೆ ಅವರು 10 ಜೊತೆ ತಾಳ ವನ್ನು ಮಂಡಳಿಗೆ ನೀಡಿ ಸಹಕರಿಸಿದರು.

LEAVE A REPLY

Please enter your comment!
Please enter your name here