ಲಾಯಿಲ: ಲಾಯಿಲ ಪ್ರಸನ್ನ ಕಾಲೇಜು ಆವರಣದಲ್ಲಿ ಡಿ.17ರಂದು ನಡೆದ ಕಾಂಗ್ರೆಸ್ ಪಕ್ಷದ ಗ್ರಾಮ ಸಮಿತಿಗಳ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಿ ಶುಭಹಾರೈಸಿದರು.
ಈ ಸ್ಪರ್ಧೆಯ ಫಲಿತಾಂಶದ ಬಹುಮಾನವನ್ನು ಮಾಜಿ ಸಚಿವ ಕೆ ಗಂಗಾಧರ ಗೌಡ, ಮಾಜಿ ಶಾಸಕ ಕೆ ವಸಂತ ಬಂಗೇರ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಮತ್ತು ರಂಜನ್ ಜಿ ಗೌಡ , ಸ್ವಾಗತ ಸಮಿತಿಯ ಅಧ್ಯಕ್ಷರುಗಳಾದ ರಾಜಶೇಖರ ಅಜ್ರಿಯವರು ವಿತರಿಸಿದರು.
ಫಲಿತಾಂಶ:
ಮ್ಯಾಟ್ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಮಚ್ಚಿನ ಗ್ರಾಮ ಕಾಂಗ್ರೆಸ್ ಸಮಿತಿ ಪಡೆದುಕೊಂಡಿದ್ದು 1 ಲಕ್ಷ ರೂ, ಇಂದಿರಾ ಟ್ರೋಫಿಯನ್ನು ಗಳಿಸಿಕೊಂಡಿದೆ. ದ್ವಿತೀಯ ಬಡಗಕಾರಂದೂರು ಕಾಂಗ್ರೆಸ್ ಗ್ರಾಮ ಸಮಿತಿ ಪಡೆದು, 50 ಸಾವಿರ ರೂ, ಇಂದಿರಾ ಟ್ರೋಫಿಯನ್ನು ಗಳಿಸಿಕೊಂಡಿದೆ. ತೃತೀಯ ಸ್ಥಾನವನ್ನು ಧರ್ಮಸ್ಥಳ ಕಾಂಗ್ರೆಸ್ ಗ್ರಾಮ ಸಮಿತಿ ಪಡೆದುಕೊಂಡಿದ್ದು 25,000 ರೂ ಹಾಗೂ ಇಂದಿರಾ ಟ್ರೋಫಿಯನ್ನು ಗಳಿಸಿಕೊಂಡಿದ್ದು, ಚತುರ್ಥ ಸ್ಥಾನವನ್ನು ಗರ್ಡಾಡಿ ಕಾಂಗ್ರೆಸ್ ಗ್ರಾಮ ಸಮಿತಿ ಪಡೆದು 10 ಸಾವಿರ ರೂ ಹಾಗೂ ಇಂದಿರಾ ಟ್ರೋಫಿಯನ್ನು ಗಳಿಸಿಕೊಂಡಿದೆ.
ಮಹಿಳೆಯರ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ತೋಟತ್ತಾಡಿ ಕಾಂಗ್ರೆಸ್ ಗ್ರಾಮ ಸಮಿತಿ ಪಡೆದುಕೊಂಡಿದ್ದು, 10 ಸಾವಿರ ರೂ ಮತ್ತು ಇಂದಿರಾ ಟ್ರೋಫಿಯನ್ನು ಗಳಿಸಿಕೊಂಡಿದೆ. ದ್ವಿತೀಯ ಸ್ಥಾನವನ್ನು ಪುದುವೆಟ್ಟು ಕಾಂಗ್ರೆಸ್ ಗ್ರಾಮ ಸಮಿತಿ ಪಡೆದು, 5 ಸಾವಿರ ರೂ ಮತ್ತು ಇಂದಿರಾ ಟ್ರೋಫಿ ಹಾಗೂ ತೃತೀಯ ಸ್ಥಾನವನ್ನು ಧರ್ಮಸ್ಥಳ ಕಾಂಗ್ರೆಸ್ ಗ್ರಾಮ ಸಮಿತಿ ಪಡೆದುಕೊಂಡು 2,500 ಮತ್ತು ಇಂದಿರಾ ಟ್ರೋಫಿಯನ್ನು ಗಳಿಸಿಕೊಂಡಿದೆ.