ಸೆಂಟ್ ಲಾರೆನ್ಸ್   ಕತ್ತಿಯಡ್ರಲ್ ದೇವಾಲಯ ಬೆಳ್ತಂಗಡಿ ಇದರ ನೇತೃತ್ವದಲ್ಲಿ ನಿರ್ಮಿಸಿದ ಜ್ಯೂಬಿಲಿ ಮನೆಯ ಹಸ್ತಾಂತರ

0

ಬೆಳ್ತಂಗಡಿ: ಸೆಂಟ್ ಲಾರೆನ್ಸ್ ದೇವಾಲಯದ ನೇತೃತ್ವದಲ್ಲಿ ಮಾಡಿರುವ ಕಾರ್ಯಕ್ಕೆ ಅಭಿನಂದನೆಯನ್ನು ಸಲ್ಲಿಸಿ ನೂತನ ಮನೆಯ ಆಶೀರ್ವಾದ ಹಾಗೂ ಹಸ್ತಾಂತರ ಕಾರ್ಯಕ್ರಮವನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ  ಲಾರೆನ್ಸ್   ಮುಕ್ಕುಯಿ  ಇವರು ನಿರ್ವಹಿಸಿದರು.

ರಾಜೇಶ್  ಮಾಡಶೇರಿ  ಹಾಗೂ ಕುಟುಂಬದವರಿಗೆ ಸೆಂಟ್ ಲಾರೆನ್ಸ್   ಕತ್ತಿಯಡ್ರಲ್ ದೇವಾಲಯದ  ಧರ್ಮಗುರುಗಳಾದ  ವಂ. ಸ್ವಾಮಿ  ಥಾಮಸ್ ಕಣ್ಣಂಗಲ್ ಅವರ ನೇತೃತ್ವದಲ್ಲಿ ಧರ್ಮ ಕೇಂದ್ರದ ವಿವಿಧ ಸಂಘಟನೆಗಳ ಹಾಗೂ ಅನೇಕ ಉದಾರ ದಾನಿಗಳ ಸಹಕಾರದೊಂದಿಗೆ ರೂ. 12 ಲಕ್ಷದ  ನೂತನ ಮನೆಯನ್ನು  ಕೊಯ್ಯುರು ಕ್ರಾಸ್  ನ  ಕೊಪ್ಪದ ಬೈಲು ಎಂಬಲ್ಲಿ ನಿರ್ಮಿಸಿ ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಧರ್ಮ ಪ್ರಾಂತ್ಯದ ಅನೇಕ ಧರ್ಮ ಗುರುಗಳು, ಧರ್ಮಭಗಿನಿಯರು  ಹಾಗೂ  ಅನೇಕ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here