ಉಬರಡ್ಕದಲ್ಲಿ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಹಾನಿ

0

 

ಉಬರಡ್ಕ ಗ್ರಾಮದ ಮಾಣಿಬೆಟ್ಟು ನಿವಾಸಿ ಪಿತಾಂಬರ ರವರ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಹೋದ ಘಟನೆ ನ.3 ರಂದು ನಡೆದಿದೆ.

ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸಿ ಮನೆಗೆ ಬೆಂಕಿ ತಗಲುವುದನ್ನು ತಪ್ಪಿಸಲಾಯಿತು. ಕೊಟ್ಟಿಗೆಯಲ್ಲಿದ್ದ ತೆಂಗಿನಕಾಯಿ, ಸೌದೆ, ಇನ್ನಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಕೊಟ್ಟಿಗೆ ಸಂಪೂರ್ಣ ಸುಟ್ಟು ಹೋಗಿದೆ. ಪಕ್ಕದಲ್ಲಿ ಇದ್ದ ತೆಂಗಿನಮರವೂ ಕೂಡ ಸುಟ್ಟು ಹೋಗಿರುತ್ತದೆ.

 

LEAVE A REPLY

Please enter your comment!
Please enter your name here