ಮುರುಳ್ಯ ಗ್ರಾಮದ ಕಾಯರ್ತಡ್ಕ ವಿಶ್ವನಾಥ (45ವ.) ಎಂಬವರು ಮರದಿಂದ ಬಿದ್ದು ಮೃತಪಟ್ಟ ಘಟನೆ ಅ. 31ರಂದು ವರದಿಯಾಗಿದೆ.
ವಿಶ್ವನಾಥರು ವಸಂತ ಎಂಬವರ ಜಮೀನಿನಲ್ಲಿ ಸೊಪ್ಪಿನ ಕೆಲಸ ಮಾಡುತ್ತಿದ್ದಾಗ ಸಣ್ಣ ಕುಂಟಲು ಜಾತಿಯ ಮರದಿಂದ ಬಿದ್ದಿದ್ದರು. ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಮೃತರಿಗೆ ಮೂರ್ಚೆ ರೋಗವಿದ್ದ ಕಾರಣ ಸೊಪ್ಪು ಕಡಿಯುತ್ತಿದ್ದಾಗ ಹೃದಯಾಘಾತವಾಗಿ ಕೆಳಗೆ ಬಿದ್ದಿರಬಹುದೆಂದು ಶಂಕಿಸಲಾಗಿದ್ದು ಈ ಬಗ್ಗೆ ಮೃತರ ತಾಯಿ ಬೀತುರುರವರು
ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.