ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಇದರ ಕಾನೂನು ಸಲಹೆಗಾರರಾಗಿ ಸುಳ್ಯದ ನ್ಯಾಯವಾದಿ ಹಾಗೂ ನೋಟರಿ ಅಬೂಬಕ್ಕರ್ ಅಡ್ಕಾರ್ ರವರನ್ನು ಜಿಲ್ಲಾ ಸಹಕಾರಿ ಸಂಘದ ಆಡಳಿತ ಮಂಡಳಿ ನೇಮಕ ಮಾಡಿದೆ.
ಅಬೂಬಕ್ಕರ್ ರವರು ಕಳೆದ 20 ವರ್ಷದಿಂದ ಅಲ್ಪಸಂಖ್ಯಾತ ವಿವಿಧೋದ್ದೇಶ ಸಹಕಾರಿ ಸಂಘದ ಕಾನೂನು ಸಲಹೆಗಾರರಾಗಿ, ಕೋಆಪರೇಟಿವ್ ಸೊಸೈಟಿಗಳ ಗೌರವ ಮಧ್ಯಸ್ಥಿಗೆದಾರರಾಗಿ, ಕಾನೂನು ಸೇವೆಗಳ ಸಮಿತಿಯಿಂದ ಪ್ಯಾನಲ್ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು,ಕೇಂದ್ರ ಸರಕಾರದಿಂದ ಜಿಲ್ಲಾ ನೋಟರಿಯಾಗಿಯೂ ಸುಳ್ಯದಲ್ಲಿ ಸೇವೆಯನ್ನು ನೀಡುತ್ತಿದ್ದಾರೆ.