ಗಜಕೇಸರಿ ನಡುಬೈಲು ಸುಳ್ಯ ತಂಡದಿಂದ ಸಹಾಯಧನ ವಿತರಣೆ

0

ಇತ್ತೀಚೆಗೆ ನಡೆದ ಶ್ರೀ ಶಾರದಾಂಬೋತ್ಸವ ಟ್ಯಾಬ್ಲೋಗಳ ಮೆರವಣಿಗೆ ಸಂದರ್ಭದಲ್ಲಿ ಗಜಕೇಸರಿ ನಡುಬೈಲು ಜಟ್ಟಿಪಳ್ಳ ಇವರು ಚೆಂಬು ಗ್ರಾಮದ ತೇಜಸ್ ಹಾಗೂ ಕಾಂತಮಂಗಲದ ತಶ್ವಿತ್‌ಗೆ ಚಿಕಿತ್ಸೆಗೆ ಆರ್ಥಿಕ ನೆರವು ಬೇಕಾಗಿದ್ದು ಇದನ್ನು ಮನಗಂಡ ಗಜಕೇಸರಿ ತಂಡದವರು ವೇಷ ಭೂಷಣ ಹಾಕಿಕೊಂಡು ಶಾರದಾಂಬೋತ್ಸವ ಸಂದರ್ಭದಲ್ಲಿ

 

ಸುಮಾರು ರೂ. 2,50,520 ಸಂಗ್ರಹ ಮಾಡಿದ್ದು ಈ ಹಣದಲ್ಲಿ ಚೆಂಬು ಗ್ರಾಮದ ತೇಜಸ್ಸ್‌ಗೆ ರೂ.2 ಲಕ್ಷ ಹಾಗೂ ತಶ್ವಿತ್‌ಗೆ ರೂ. 50,520 ಗಳನ್ನು ನೀಡಿ ಸಹಕರಿಸಿದ್ದಾರೆ.

ಈ ಸಂದರ್ಭದಲ್ಲಿ ಗಜಕೇಸರಿ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here