ಕನ್ನಡದ ಮಹತ್ವದ ಕತೆಗಾರ ಮತ್ತು ಕಾದಂಬರಿಗಾರರಾಗಿರುವ ಡಾ. ಪ್ರಭಾಕರ ಶಿಶಿಲರ ಅಪೂರ್ವ ಕಾದಂಬರಿ ಚಿದಗ್ನಿ ಅಕ್ಟೋಬರ 29 ರಂದು ಬೆಳಿಗ್ಗೆ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬಿಡುಗಡೆಯಾಗಲಿದೆ. ಕನ್ನಡದ ಬಹುಶ್ರುತ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಯವರು ಕೃತಿ ಲೋಕಾರ್ಪಣೆ ಮಾಡಿ ಕೃತಿಯ ಬಗ್ಗೆ ಮಾತಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಶ್ರೀ ಸುಬ್ರಃಹ್ಮಣ್ಯ ದೇವಳದ ಆಡಳಿತ ನಿರ್ವಹಣಾಧಿಕಾರಿ ನಿಂಗಯ್ಯ ವಹಿಸಲಿದ್ದಾರೆ. ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ರೊ| ಗೋಪಾಲ ಎಣ್ಣೆಮಜಲು ಮತ್ತು ಕುಕ್ಕೆ ಶ್ರೀ ಜೇಸೀಸ್ ಅಧ್ಯಕ್ಷ ಜೇಸೀ ದೀಪಕ್ ನಂಬಿಯಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.