ಸುಮಾರು 18 ವರ್ಷಗಳಿಂದ ಶ್ರೀ ಶಾರದಾಂಬಾ ಸೇವಾ ಸಮಿತಿ ಪೆರಾಜೆ ಇಲ್ಲಿ ನಡೆಯುವ ಶಾರದಾ ಪೂಜೆಗೆ ಅನ್ನದಾನ ನೀಡುತ್ತಿದ್ದ ಪಾಕತಜ್ಞ ಪದ್ಮನಾಭ ಭಟ್ ದಂಪತಿಗಳಿಗೆ ಸಮಿತಿಯ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ವೇದವ್ಯಾಸ ತಂತ್ರಿ ಪೆರಾಜೆ, ಕಾರ್ಯದರ್ಶಿ ಉಮೇಶ್ ಕುಂಬಳಚೇರಿ, ರಮೇಶ್ ಪಿ.ಬಿ., ಬಿ.ಎಂ. ತಿರುಮಲೇಶ್ವರ, ಮುಖ್ಯಪ್ರಾಣ ಕಲ್ಲೂರಾಯ, ವಿಜಯಕೃಷ್ಣ ಕೆ..ಎಸ್., ಸೂರ್ಯನಾರಾಯಣ ಭಟ್, ಮಹಾಬಲೇಶ್ವರ ಭಟ್, ಕೃಷ್ಣ ಶರ್ಮ, ಉದಯ ಆಚಾರ್ಯ, ಧರ್ಮಪಾಲ ಪೀಚೆ, ಜನಾರ್ದನ ನಾಯ್ಕ ನಿಡ್ಯಮಲೆ, ದಾಸಪ್ಪ ಮಡಿವಾಳ, ಉಪಸ್ಥಿತರಿದ್ದರು.