ಅಧ್ಯಕ್ಷರಾಗಿ ಮಾಯಿಲಪ್ಪ ಗೌಡ ಕೊಂಬೆಟ್ಟು, ಕಾರ್ಯದರ್ಶಿಯಾಗಿ ಮೋಹನ್ ಶಿರಾಜೆ
ಗುತ್ತಿಗಾರಿನಲ್ಲಿ ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ಅಸ್ತಿತ್ವಕ್ಕೆ ಬಂದಿದ್ದು ಸ್ಥಾಪಕ ಅಧ್ಯಕ್ಷರಾಗಿ ಮಾಯಿಲಪ್ಪ ಗೌಡ ಕೊಂಬೆಟ್ಟು, ಕಾರ್ಯದರ್ಶಿಯಾಗಿ ಮೋಹನ್ ಶಿರಾಜೆ ಅವರಗಳು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಗಿರಿಪ್ರಸಾದ್ ಪಾರೆಪ್ಪಾಡಿ ಹಾಗೂ ಪ್ರಮೋದ್ ಮೆಟ್ಟಿನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್ ಶಿರಾಜೆ, ಜೊತೆ ಕಾರ್ಯದರ್ಶಿಯಾಗಿ ಶಿವ ಮೋಟ್ನೂರು, ಕೋಶಾಧಿಕಾರಿಯಾಗಿ ನಿರಂತ್ ದೇವಶ್ಯ, ಕಲಾ ಹಾಗೂ ಕ್ರೀಡಾ ನಿರ್ದೇಶಕರಾಗಿ ರವೀಶ್ ಪೈಕ ಆಯ್ಕೆಯಾದರು. ಈ ಸಂಧರ್ಭದಲ್ಲಿ ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ನಿರ್ದೇಶಕರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ವೀರಾಂಜನೇಯ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗುತ್ತಿಗಾರು ಕೇಂದ್ರೀಕೃತವಾಗಿ ಶಾಲಾ ವಿದ್ಯಾರ್ಥಿಗಳಿಗೆ ಸೆ.18 ರಿಂದ ಕ್ರೀಡಾ ತರಭೇತಿ ಆರಂಭವಾಗಿದ್ದು 80 ಮಕ್ಕಳು ತರಬೇತಿ ಪಡೆಯುತಿದ್ದಾರೆ.