ಸುಳ್ಯ ಅಧಿಕಾರಿಗಳ ಮನೋರಂಜನಾ ಸಂಘ ಪದಗ್ರಹಣ ಸಮಾರಂಭ

0

 

ಎಸ್. ಪಿ. ಮಹಾದೇವ, ಸುಬ್ರಹ್ಮಣ್ಯ ಎ.ಯು. ರಿಗೆ ಸನ್ಮಾನ

 

ಸುಳ್ಯ ಅಧಿಕಾರಿಗಳ ಮನೋರಂಜನಾ ಸಂಘದ ಪದಗ್ರಹಣ ಸಮಾರಂಭ ಹಾಗೂ ಸನ್ಮಾನ ಸಮಾರಂಭ ಸೆ.14 ರಂದು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ತಹಶೀಲ್ದಾರ್ ಅನಿತಾಲಕ್ಷ್ಮೀ ಯವರ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಇ.ಒ. ಭವಾನಿಶಂಕರ್ ಎನ್ ಪದಗ್ರಹಣ ಅಧಿಕಾರಿಗಯಾಗಿದ್ದರು. ನೂತನ ಅಧ್ಯಕ್ಷ ಡಾ.ನಿತಿನ್ ಪ್ರಭುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಂಘದ ನಿಕಟಪೂರ್ವಾಧ್ಯಕ್ಷ ಎಸ್.ಪಿ. ಮಹಾದೇವರು ಅಧಿಕಾರಿಗಳ ಕಟ್ಟಡದ ಕೀಲಿ ಕೈ ಹಸ್ತಾಂತರಿಸಿದರು.


ಕಾರ್ಯದರ್ಶಿ ಪ್ರಕಾಶ ಮೂಡಿತ್ತಾಯರಿಗೆ ನಿಕಟಪೂರ್ವ ಕಾರ್ಯದರ್ಶಿ ವೀಣಾ ಎಂ.ಟಿ, ನೂತನ ಕೋಶಾಧಿಕಾರಿ ಶ್ರೀಮತಿ ರಶ್ಮಿ ನೆಕ್ರಾಜೆಯಚರಿಗೆ ನಿಕಟಪೂರ್ವ ಕಾರ್ಯದರ್ಶಿ ಶಂಕರ ಪಾಟಾಳಿಯವರು ದಾಖಲೆ ಪತ್ರ ಹಸ್ತಾಂತರ ಮಾಡಿದರು.

ಸನ್ಮಾನ: ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹಾದೇವ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಎ.ಯು. ರನ್ನು ಸನ್ಮಾನಿಸಲಾಯಿತು.
ಸಂಘದ ಸುದ್ದಿ ಪತ್ರ ವನ್ನು ತಾ.ಪಂ. ಇ.ಒ. ಭವಾನಿಶಂಕರ್ ಎನ್ ಬಿಡುಗಡೆಗೊಳಿಸಿ, ಶುಭಹಾರೈಸಿದರು.

ಡಾ. ಸಾಯಿಗೀತಾ ಜ್ಞಾನೇಶ್ ಪ್ರಾರ್ಥಿಸಿದರು. ಮುಖ್ಯಶಿಕ್ಷಕಿ ವಿಜಯಲಕ್ಷ್ಮಿ ದಿನದ ಚಿಂತನ – ಮಂಥನ ಮುಂದಿಟ್ಟರು. ನೂತನ ಕೋಶಾಧಿಕಾರಿ ರಶ್ಮಿ ನೆಕ್ರಾಜೆ ಸ್ವಾಗತಿಸಿದರು. ಶಂಕರ ಪಾಟಾಳಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ರೀಮತಿ ಶೀತಲ್ ಯು ಹಾಗೂ ಶ್ರೀಮತಿ ಉಮಾಕುಮಾರಿ ಸನ್ಮಾನಿತರನ್ನು ಪರಿಚಯಿಸಿದರು. ನೂತನ ಕಾರ್ಯದರ್ಶಿ ಪ್ರಕಾಶ ಮೂಡಿತ್ತಾಯ ವಂದಿಸಿದರು.
ಸತೀಶ್ ಕೊಯಿಂಗಾಜೆ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಕರುಣಾಕರ ಕೆ.ವಿ., ಶ್ರೀಮತಿ ಸುಹಾನ, ಮಂಜುನಾಥ ಎನ್., ಪ್ರವೀಣ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಇದ್ದರು.

LEAVE A REPLY

Please enter your comment!
Please enter your name here