ನಾಲ್ಕೂರು : ಆತ್ಮ ಯೋಜನೆಯಡಿ ರೈತರಿಗೆ ಮಾಹಿತಿ

0

 

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಸುಳ್ಯ ತಾಲೂಕು ಪಂಜಹೋಬಳಿ ಇದರ ವತಿಯಿಂದ 2022-  21ನೇ ಸಾಲಿನ ಆತ್ಮ ಯೋಜನೆಯಡಿ ರೈತ ಆಸಕ್ತ ಗುಂಪು ರಚನೆ ಮತ್ತು ಕೌಶಲ್ಯ ಅಭಿವೃದ್ಧಿ ಯೋಜನೆ ಸಂಘ ರಚನೆ ಇಂದು ಹಾಲೆಮಜಲಿನ ದಿನೇಶ್ ಹಾಲೆಮಜಲ್ ಅವರ ಮನೆಯಲ್ಲಿ ನಡೆಯಿತು.

 

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ದೇವಕಿ ಯುವರಾಜ ಆಡ್ಕಾರು ರವರು ರವರು ದೀಪ ಬೆಳಗಿಸಿ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ದೊಡ್ಡತೋಟದ ಹೇಮಂತ್ ಕುಮಾರ್ ಅವರು ಸಾವಯವ ಕೃಷಿ ಬಗ್ಗೆ ಮಾಹಿತಿ ನೀಡಿದರು.

 

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಪಂಜ ಇಲ್ಲಿನ ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಆತ್ಮಯೋಜನೆ ಇದರ ಸುಹಾಸ್ ರೈ ಉಪಸಿತರಿದ್ದರು ಕಾರ್ಯಕ್ರಮದಲ್ಲಿ ಅಶ್ವಿನಿ ಕುಕ್ಕುಜೆ ಹಾಗೂ ಪವಿತ್ರ ಕುಕ್ಕುಜೆ ಪ್ರಾರ್ಥಿಸಿದರು. ಸುಮಾರು ಹದಿನೈದು ಮಂದಿ ಸದಸ್ಯರು ಸಂಘಕ್ಕೆ ಸೇರ್ಪಡೆಗೊಂಡರು. ಸದಸ್ಯರುಗಳಿಗೆ ಸುಹಾಸ್ ರೈ ಸಂಘದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಸಂಘಕ್ಕೆ ಬೇಕಾದ ಕಿಟ್ ವಿತರಿಸಿದರು.

LEAVE A REPLY

Please enter your comment!
Please enter your name here