ಬೆಳ್ತಂಗಡಿ: ಶ್ರೀ ನಂದಿಕೇಶ್ವರ ದೇವಸ್ಥಾನ ನಂದಿಬೆಟ್ಟ ಇದರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಯೋಗೀಶ್ ಭಟ್ ಕೊಟ್ರೋಡಿ ಇವರನ್ನು ಬೆಳ್ತಂಗಡಿ ವಿಧಾನಸಭಾ ಶಾಸಕರಾದ ಹರೀಶ್ ಪೂಂಜಾ ಹಾಗೂ ಊರ ಹಿರಿಯರ ಸಮ್ಮುಖದಲ್ಲಿ ಆರಿಸಲಾಯಿತು.
ಸಮಿತಿಯ ಸದಸ್ಯರುಗಳಾದ ರಾಜೇಶ್ ಆಚಾರ್ಯ, ಕೃಷ್ಣಪ್ಪ, ಸುಜಯ್ ಶೆಟ್ಟಿ, ಗಣೇಶ್ ಭಟ್, ರಮೇಶ್ ಪೂಜಾರಿ, ಹೇಮಲತ , ದಿವ್ಯಾ ಹಾಗೂ ಈಶ್ವರ ಗೌಡ ಇವರುಗಳು ಉಪಸ್ಥಿತರಿದ್ದರು.