ಪುದುವೆಟ್ಟು: ಶ್ರೀ ಧರ್ಮಸ್ಥಳ ಮಂಜುನಾಥೆಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪುದುವೆಟ್ಟುವಿನಲ್ಲಿ 67ನೇ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಹಿರಿಯ ಶಿಕ್ಷಕರಾದ ಜೋಸೆಫ್ ಪಿಎಂ ರವರು ವಹಿಸಿ ಮಾತನಾಡಿ ಕನ್ನಡ ದ ಹಿರಿಮೆ, ಕನ್ನಡ ನಾಡಿನ ಮಹತ್ವ, ಕನ್ನಡ ಕವಿಗಳ ಬಗ್ಗೆ ಮಕ್ಕಳಿಗೆ ತಿಳಿಸಿ ದರು,
ಶಿಕ್ಷಕರಾದ ನಿಶಾಂತ್ ರವರು ಕನ್ನಡ ರಾಜ್ಯೋತ್ಸವದ ಹಿನ್ನಲೆ ಯ ಬಗ್ಗೆ ತಿಳಿಸಿ ದರು. ಶಾಲಾ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಬಗ್ಗೆ ಭಾಷಣ ಮಾಡಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವು ಮಕ್ಕಳ ಸ್ವಾಗತ ನೃತ್ಯ ದೊಂದಿಗೆ ಆರಂಭವಾಗಿ, ಸುಜಾತಾ ರವರು ಸ್ವಾಗತಿಸಿದರು, ಕುಮಾರಿ ವೇದಾವತಿ ಧನ್ಯವಾದಗೈದರು, ಸೀಮಾ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಎಲ್ಲಾ ಶಿಕ್ಷಕರು ಸಹಕರಿಸಿದರು.