ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಪದಾಧಿಕಾರಿಗಳ ಆಯ್ಕೆ

0

ಮುಂಡಾಜೆ: ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ರಿ. ಮುಂಡಾಜೆ ಇದರ ಮುಂದಿನ ಸಾಲಿನ ಅಧ್ಯಕ್ಷರಾಗಿ ಶೀನಪ್ಪ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಶಶಿಧರ ಠೋಸರ್, ಕೋಶಾಧಿಕಾರಿಯಾಗಿ ಸಾಂತಪ್ಪ ಕಲ್ಮಂಜ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಇದೀಗ ನೂತನ ಸಮಿತಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಂಘದ ಸಂಸ್ಥಾಪಕರು ಹಾಗೂ ಸಂಚಾಲಕರಾಗಿ ನಾಮದೇವ ರಾವ್,
ಉಪಾಧ್ಯಕ್ಷರುಗಳಾಗಿ ಪುಷ್ಪರಾಜ್ ಮತ್ತು ವಿಜಯ ಕುಮಾರ್, ಕಾರ್ಯದರ್ಶಿಯಾಗಿ ಲಕ್ಷ್ಮಣ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದಾಮೋಧರ ನಾಯರ್, ಜೊತೆ ಕಾರ್ಯದರ್ಶಿಯಾಗಿ ಕಸ್ತೂರಿ ಕೇಶವ್, ಕ್ರೀಡಾ ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ಸಚಿನ್ ಮಾಡ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣಪ್ಪ, ನಾರಾಯಣ ಪೂಜಾರಿ‌ ದೂಂಬೆಟ್ಟು, ಭಾರತಿ ಆಚಾರ್ಯ, ಶೀನ ಕಲ್ಮಂಜ, ಸುರೇಶ್ ಗೌಡ, ದಿಶಾಂತ್ ಶೆಟ್ಟಿ, ಉದಯ ಗೌಡ, ‌ಮುಹಮ್ಮದ್ ಬಶೀರ್ ನೆಕ್ಕರೆ ಮತ್ತು ಲಾರೆನ್ಸ್ ಇವರು ಆಯ್ಕೆಯಾದರು.

ಉಳಿದಂತೆ ತಾಂತ್ರಿಕ ನಿರ್ದೇಶಕರಾಗಿ ಕೃಷ್ಣಾನಂದ ರಾವ್, ಕಾನೂನು ಸಲಹೆಗಾರರಾಗಿ ಶೈಲೇಶ್ ಠೋಸರ್, ಲೆಕ್ಕಪರಿಶೋಧಕರಾಗಿ ಸಚಿನ್ ಹೆಬ್ಬಾರ್, ಗೌರವ ಸಲಹೆಗಾರರಾಗಿ ನಾರಾಯಣ ಗೌಡ ದೇವಸ್ಯ, ಅಗರಿ ರಾಮಣ್ಣ ಶೆಟ್ಟಿ, ರಾಘವ ಶೆಟ್ಟಿ ನೆಯ್ಯಾಲು, ರಾಮ ಆಚಾರಿ ಒಂಜರೆಬೈಲು, ಡಾ. ಶಿವಾನಂದ ಸ್ವಾಮಿ ಇವರು ಆಯ್ಕೆಯಾದರು. ಅಂತೆಯೇ ಮಾಜಿ ಅಧ್ಯಕ್ಷ ಮಂಡಳಿಗೆ ವಿಷ್ಣು ಎಂ ಗೋಖಲೆ, ಚಂದ್ರಶೇಖರ ಶೆಟ್ಟಿ, ಕೇಶವ ದೇವಾಂಗ, ಜಯರಾಂ ಕೆ, ನಾಗರಾಜ ನಾಯ್ಕ ಇವರ ಜೊತೆಗೆ ಅಶ್ರಫ್ ಆಲಿಕುಂಞಿ ಇವರು ಸೇರ್ಪಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here