ಪುಂಜಾಲಕಟ್ಟೆ: ಎಲ್. ಸಿ.ಆರ್ ಇಂಡಿಯನ್ ಸ್ಕೂಲ್ ಕಕ್ಯಪದವಿನ 7ನೇ ತರಗತಿ ವಿದ್ಯಾರ್ಥಿ ಸಾನ್ವಿತ್ ಕೆ ಅ.9ರಂದು ಕೊಡಗು ಜಿಲ್ಲೆಯ ಕುಶಾಲನಗರದ ರೈತ ಸಭಾಭವನದಲ್ಲಿ ಕಲಾಭೂಮಿ ಮಾರ್ಷಲ್ ಆರ್ಟ್ಸ್ ಆಯೋಜಿಸಿದ ರಾಜ್ಯಮಟ್ಟದ ಕರಾಟೆ ಕೊಡಗು ಕಪ್ ನಲ್ಲಿ 12 ವರ್ಷದೊಳಗಿನ ವಿಭಾಗದ ಕಟಾ ಹಾಗೂ ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿದ್ದು, ಟ್ರೋಪಿಯನ್ನು ಪಡೆದುಕೊಂಡಿರುತ್ತಾರೆ.
ಇವರು ಕರಾಟೆ ಗುರುಗಳಾದ ಅಶೋಕ್ ಆಚಾರ್ಯ ಶಿಷ್ಯರಾಗಿದ್ದಾರೆ. ಬಂಟ್ವಾಳ ತಾಲೂಕಿನ ಕಕ್ಯಪದವಿನ ಸನತ್ ಕುಮಾರ್ ಹಾಗೂ ವಿದ್ಯಾ ದಂಪತಿಯ ಪುತ್ರ.