ಜಿ. ಕೃಷ್ಣ ಬೆಳ್ತಂಗಡಿ ಅವರಿಗೆ ಕಟೀಲಿನಲ್ಲಿ “ಯುವ ರತ್ನ” ಪ್ರಶಸ್ತಿ ಪ್ರಧಾನ

0

ಬೆಳ್ತಂಗಡಿ: ಬೆಂಗಳೂರಿನ ಜಾಗೃತಿ ಟ್ರಸ್ಟ್ ಅವರು ನ.23ರಂದು ಕಟೀಲು ಸರಸ್ವತಿ ಭವನದಲ್ಲಿ ಆಯೋಜಿಸಿದ್ದ “ಸಾಂಸ್ಕೃತಿಕ ವೈಭವ” ಕಾರ್ಯಕ್ರಮದಲ್ಲಿ ಸಿನಿಮಾ ಹಾಗೂ ಜಾಹೀರಾತು ಚಿತ್ರ ನಿರ್ದೇಶಕ ಜಿ. ಕೃಷ್ಣ ಬೆಳ್ತಂಗಡಿ ಅವರಿಗೆ “ಯುವ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಆಳ್ವಾಸ್ ಸಂಸ್ಥೆಯ ಮೋಹನ್ ಆಳ್ವ, ಕರ್ನಾಟಕ ಸರಕಾರದ ಸಾರಿಗೆ ಇಲಾಖೆಯ ಉಪ ಆಯುಕ್ತ ಮಂಜುನಾಥ್, ಕಿನ್ನಿಗೋಳಿಯ ಭುವನಭಿರಾಮ್ ಉಡುಪ, ಚಲನಚಿತ್ರ ಕಲಾವಿದರಾದ ಪ್ರಕಾಶ್ ತುಮಿನಾಡು, ಅವಿನಾಶ್ ಶೆಟ್ಟಿ, ಮಂಗಳೂರು ಸಾರಿಗೆ ಇಲಾಖೆಯ ಶ್ರೀಧರ್ ಹಾಗೂ ಇನ್ನಿತರ ಗಣ್ಯರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here