ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ-ಅಧ್ಯಕ್ಷರಾಗಿ ರಘುಪತಿ ಜೆ. ತೊಡಿಕಾನ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಜೆ.ಕೆ., ಖಜಾಂಚಿಯಾಗಿ ಅಯ್ಯಪ್ಪ

0

ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘ ದ ನೂತನ ಪದಾಧಿಕಾರಿಗಳ ಆಯ್ಕೆ ಉಜಿರೆಯ ಶಾರದಾ ಮಂಟಪದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ರಘುಪತಿ ಜೆ. ತೊಡಿಕಾನ, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಜೆ.ಕೆ., ಖಜಾಂಚಿಯಾಗಿ ಅಯ್ಯಪ್ಪ, ಗೌರವ ಸಲಹೆಗಾರರಾಗಿ ಅನಿಲ್ ಕುಮಾರ್ ಯು., ನಾಗರಾಜ್ ಮಾಚಾರು, ಉದಯ್ ಬಿ.ಕೆ., ಅನುಜ್ ಜೈ ರಾಜ್ ಸಾಲಿಯಾನ್, ಉಪಾಧ್ಯಕ್ಷರಾಗಿ ರಾಜ ಮಾಚಾರು, ನಾಗೇಶ್ ನೆರಿಯ, ಶಶಿಕುಮಾರ್ ಸುಳ್ಯ, ಅಮೃತಲಿಂಗಂ ಪುತ್ತೂರು, ಲೊಲಾಕ್ಷಿ ಮಾಚಾರು, ಕಾರ್ಯದರ್ಶಿಯಾಗಿ ನಾಗೇಂದ್ರ ಪಿ., ಮೋಹನ್ ಕುಮಾರ್ ಕುಶಾಲಪ್ಪ ಗೌಡ, ಸ್ಟಾಲಿನ್, ಸಂಘಟನಾ ಕಾರ್ಯದರ್ಶಿಗಳಾಗಿ ಅರುಣ್ ವರ್ಧನ್, ಆನಂದ್ ರಾಜ್, ಕಾರ್ಯಕಾರಿ ನಿರ್ದೇಶಕರಾಗಿ ನಾಗರಾಜ ಸಾಗರ, ಕೃಷ್ಣಮೂರ್ತಿ ಸಾಗರ, ಸದಾನಂದ ಕಲ್ಮಂಜ, ಮಯಿಲ್ ವಾಹನ, ಪ್ರಕಾಶ್ ಇಜ್ಜಲ, ಹರಿಶ್ಚಂದ್ರ ಮಿತ್ತ ಬಾಗಿಲು, ಸುರೇಂದ್ರ ಕೆ. ನಾವರ, ಜ್ಞಾನಸುಂದರಿ, ಶಣ್ಮುಗರಾಜ್ ಗುತ್ತಿಗಾರು ಅವರನ್ನು ಆಯ್ಕೆ ಮಾಡಲಾಯಿತು.

ಆಯ್ಕೆಯ ಪ್ರಕ್ರಿಯೆಯನ್ನು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ನಾಗರಾಜ ಮಾಚಾರು ಅವರು ನೆರವೇರಿಸಿದರು. ಬಿ.ಎಂ.ಎಸ್. ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here