ಎಸ್.ಐ.ಟಿ ತಂಡದಲ್ಲಿ ಬದಲಾವಣೆಯಿಲ್ಲ-ಅನುಚೇತ್ ಹಿಂದೆ ಸರಿದಿಲ್ಲ-ಸುದ್ದಿಗೆ ಬಲ್ಲ ಮೂಲಗಳಿಂದ ಮಾಹಿತಿ

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿದ್ದೇನೆಂದು ಸಾಕ್ಷಿ ದೂರುದಾರ ನೀಡಿರುವ ದೂರಿನ ತನಿಖೆಗೆ ರಾಜ್ಯ ಸರ್ಕಾರ ಎಸ್.ಐ.ಟಿ ನೇಮಿಸಿದೆ. ನಾಲ್ವರು ಅಧಿಕಾರಿಗಳ ತಂಡದಲ್ಲಿದ್ದ ನೇಮಕಾತಿ ವಿಭಾಗದ ಉಪ‌ಪೊಲೀಸ್ ಮಹಾನಿರ್ದೇಶಕ ಎಂ. ಎನ್. ಅನುಚೇತ್ ಎಸ್.ಐ.ಟಿ.ಯಿಂದ ಹಿಂದೆ ಸರಿದಿದ್ದಾರೆ ಅನ್ನುವ ಸುದ್ದಿ ಹರಿದಾಡಿತ್ತು. ಆದರೆ ಅದು ಕೇವಲ ವದಂತಿ, ಅವರು ಹಿಂದೆ ಸರಿದಿಲ್ಲ ಅನ್ನುವುದು ಈಗ ಬಲ್ಲಮೂಲಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here