ತೋಟತ್ತಾಡಿ: ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ತೋಟತ್ತಾಡಿ: ಬೈಲಂಗಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ಪ್ರಥಮ ವರ್ಷದ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಬಾಲಕೃಷ್ಣ ಗೌಡ ಪಾದೆ ಮತ್ತು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಶೋಭಾ ಗೌಡ ಬಳ್ಳಿ ಜಂಟಿಯಾಗಿ ಬಿಡುಗಡೆಗೊಳಿಸಿದರು.

ವ್ಯವಸ್ಥಾಪನ ಸಮಿತಿ ಸದಸ್ಯ ಸನತ್ ಕುಮಾರ್ ಮೂರ್ಜೆ, ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳಾದ ಶ್ರೀನಿವಾಸ ಗೌಡ ಕಲ್ಲರಿಗೆ, ಗುರುವಪ್ಪ ಭಂಡಾರಿ ಆಗರಿ, ಬಾಲಣ್ಣ ಗೌಡ ಬಳ್ಳಿ, ಜಯಂತ ಗೌಡ ಪರಾರಿ ಭಜನಾ ಮಂಡಳಿಯ ಕಾರ್ಯದರ್ಶಿ ಸತೀಶ್ ಪೂಜಾರಿ ಮೂರ್ಜೆ, ಇಷ್ಟ ದೇವತಾ ಕ್ಷೇತ್ರ ಕಕ್ಕಿಂಜೆಯ ಅಧ್ಯಕ್ಷ ಜಯಪ್ರಸಾದ್ ಗೌಡ ಪರಾರಿ, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಕಾರ್ಯದರ್ಶಿ ಶಾರದಾ ಗೌಡ ಪಿತ್ತಿಲು, ಉಪಾಧ್ಯಕ್ಷರಾದ ಉಷಾ ಡಿ. ಮಜಲು, ಭಾರತಿ ಆಚಾರ್ಯ ಮುಂಡೈಲು, ನೇತ್ರಾವತಿ ಗೌಡ ಕೆಮ್ಮಟೆ, ಶೋಭಾ ಪೂಜಾರಿ ಬರಮೇಲು, ಸೀತಾ ನೆಲ್ಲಿಗುಡ್ಡೆ, ಜತೆ ಕಾರ್ಯದರ್ಶಿಗಳಾದ ಭವ್ಯ ಗೌಡ ಆಗರಿ, ನಿಖಿತಾ ಡಿ. ಮಜಲು, ಕೋಶಾಧಿಕಾರಿ ಸುಮತಿ ಬರಮೇಲು, ಭಜನಾ ತಂಡದ ಸಂಚಾಲಕಿ ಸ್ವಾತಿ ಗೌಡ ಅರ್ಬಿ, ಸದಸ್ಯರಾದ ಅನ್ವಿತಾ, ಅಶ್ವಿತಾ, ಸುಕನ್ಯಾ, ರಚನಾ, ಉಜ್ವಲ್, ಪ್ರಜ್ವಲ್ ಉಪಸ್ಥಿತರಿದ್ದರು. ಆಮಂತ್ರಣ ಪತ್ರಿಕೆಯನ್ನು ದೇವಸ್ಥಾನದ ಪ್ರದಾನ ಅರ್ಚಕ ದಿವಾಕರ ಭಟ್ ಅವರಿಗೆ ನೀಡಿ ಕಾರ್ಯಕ್ರಮಕ್ಕೆ ಆಮಂತ್ರಿಸಲಾಯಿತು.

LEAVE A REPLY

Please enter your comment!
Please enter your name here