ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ವಿದ್ಯಾರ್ಥಿ ಪರಿಷತ್, ಶೈಕ್ಷಣಿಕ ಸಂಘಗಳ ಉದ್ಘಾಟನೆ- ಹಳ್ಳಿಗಾಡಿನಲ್ಲೂ ಉತ್ಕೃಷ್ಟ ಶಿಕ್ಷಣ ಸೇವೆ ಎಕ್ಸೆಲ್ ಗುರಿ – ಸುಮಂತ್ ಕುಮಾರ್ ಜೈನ್ ಬಿ.

0

ವೇಣೂರು: ಶಿಕ್ಷಣ ಕ್ಷೇತ್ರದಲ್ಲಿ ದುಡಿಯುವ ಕನಸು ಎಳವೆಯಲ್ಲೇ ನನಗಿತ್ತು. ಮೂಲತಃ ಹಳ್ಳಿಗಾಡಿನವನಾಗಿ ಕನ್ನಡ ಕಲಿತ ನನಗೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯ ಶಿಕ್ಷಣ ಸುಲಭವಾಗಿ ದೊರೆಯುವಂತೆ ಮಾಡುವ ಹಂಬಲವಿತ್ತು. ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಮುಖೇನ ಅದು ಸಾಕಾರಗೊಂಡಿದೆ ಎಂದು ಎಕ್ಸೆಲ್ ಟೆಕ್ನೋ ಸೂಲ್ ಗುರುವಾಯನಕೆರೆ ಇದರ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ. ಅಭಿಪ್ರಾಯ ಪಟ್ಟರು. ಅವರು ಜೂ. 28ರಂದು. ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು, ಇದರ ವಿದ್ಯೋದಯ ಕ್ಯಾಂಪಸ್ ನಲ್ಲಿ ನಡೆದ – ವಿದ್ಯಾರ್ಥಿ ಪರಿಷತ್ತು ಮತ್ತು ಶೈಕ್ಷಣಿಕ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ಮಾತನಾಡಿ ಬೆಳ್ತಂಗಡಿ ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯ ಸುಕುಮಾರ್ ಜೈನ್, ವಿಶೇಷ ಜ್ಞಾನ ಯಾವುದು ಇವೆಯೋ ಅವೆಲ್ಲವೂ ವಿಜ್ಞಾನವೇ ಆಗಿದೆ. ಮನುಷ್ಯನ ಮೆದುಳಿಗಿಂತ ಅದ್ವಿತೀಯ ಶಕ್ತಿಯುಳ್ಳ ವಿಜ್ಞಾನ ಮತ್ತೊಂದಿಲ್ಲ ಎಂದರು.‌

ವಿದ್ಯೋದಯ ಸಂಸ್ಥೆಯ ಅಧ್ಯಕ್ಷ ಕೆ.ಶಿವರಾಮ ಹೆಗ್ಡೆ ಮಾತನಾಡಿ ವಿದ್ಯೆ ಉದಯಿಸಿ ವಿದ್ಯೋದಯ ಆದಂತೆ ಮುಂದೆ ಎಕ್ಸೆಲ್ ಆಗಿ ಬೆಳಗಲಿ ಎಂದು ಆಶಿಸಿದರು. ಸಂಚಾಲಕಿ ಶೀಲಾ ಎಸ್. ಹೆಗ್ಡೆ ಮಾತನಾಡಿ, ಶಿಸ್ತು ಮತ್ತು ಪರಿಶ್ರಮ ವಿದ್ಯಾರ್ಥಿ ಸಾಧನೆಗೆ ಪೂರಕ ಎಂದರು.

ವೇದಿಕೆಯಲ್ಲಿ ಯಕ್ಷಗಾನದ ಮೇರು ಕಲಾವಿದ ಸದಾಶಿವ ಕುಲಾಲ್, ಎಕ್ಸೆಲ್ ಸಂಸ್ಥೆಯ ಶಿಕ್ಷಣ ಸಂಯೋಜಕಿ ಕು.ನಿಶಾ ಪೂಜಾರಿ, ಆಡಳಿತ ಮಂಡಳಿ ನಿರ್ದೇಶಕಿ ಸಹನಾ ಜೈನ್, ಎಕ್ಸಲ್ ಕ್ಯಾಂಪಸ್ ಮೆನೇಜರ್ ಶಾಂತಿರಾಜ್ ಜೈನ್, ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಇದರ ಮುಖ್ಯ ಶಿಕ್ಷಕಿ ಸುಜಾತಾ ಬಿ. ಉಪಸ್ಥಿತರಿದ್ದು, ವಿಜಯವಾಣಿ ಸಮೂಹ ಸಂಸ್ಥೆಯ 2025ನೇ ಸಾಲಿನ ‘ವಿಜಯ ರತ್ನ’ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ಬಿ. ಅವರನ್ನು ಎಕ್ಸೆಲ್ ಟೆಕ್ನೋ ಸ್ಕೂಲ್ ವೇಣೂರು ಇದರ ವತಿಯಿಂದ ಸನ್ಮಾನಿಸಲಾಯಿತು.

ರಂಜಿನಿ ಪ್ರಾರ್ಥಿಸಿದ ಸಭೆಗೆ, ಕಲಾ ಸಂಘದ ಸದಸ್ಯರುಗಳಾದ ದಾಮೋದರ್ ಸ್ವಾಗತಿಸಿ, ತೀರ್ಥ ಪ್ರಸಾದ್ ಸನ್ಮಾನ ಪತ್ರ ವಾಚಿಸಿ, ಶಿಕ್ಷಕಿ ನಮನ, ದೈಹಿಕ ಶಿಕ್ಷಣ ಶಿಕ್ಷಕ ಪ್ರಸಾದ್ ಸಹಕರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ವಿಜ್ಞಾನ ಸಂಘದ ನಿರ್ದೇಶಕಿ ಕಾವ್ಯಶ್ರೀ ಎನ್. ನಿರೂಪಿಸಿದರು. ಶ್ವೇತ ಕಿರಣ್ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here