ಬೆಳ್ತಂಗಡಿ: ಯಕ್ಷ ದ್ರುವ ಪಟ್ಲ ಪೌಂಡೇಶನ್ ಮಂಗಳೂರು ಇದರ ತಾಲೂಕು ಘಟಕದಿಂದ ಸರ್ಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿಯಲ್ಲಿ ಜೂ. 27ರಂದು ವಿದ್ಯಾರ್ಥಿಗಳಿಗೆ ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ಕೆ. ವಹಿಸಿದ್ದು, ಉದ್ಘಾಟನೆಯನ್ನು ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಗೌರವ ಸಲಹೆಗಾರ ದೇವರಾಜರು ಉಪಸ್ಥಿತರಿದ್ದರು. ಕಲಿಕಾ ಗುರುಗಳಾದ ದೇವಿ ಪ್ರಸಾದ್, ಶಿಕ್ಷಕರಾದ, ಮಹೇಶ್ ಎ., ಅಬ್ದುಲ್ ನಜೀರ್, ಮೃತ್ಯುಂಜಯ, ಭಾಷಿಣಿ ಉಪಸ್ಥಿತರಿದ್ದರು. ವಿಜಯ ಕುಮಾರ್ ಎಂ. ಅವರು ಸ್ವಾಗತಿಸಿದರು. ಗಣಿತ ಶಿಕ್ಷಕಿ ನಿರೂಪಿಸಿದರು. ವಿವೇಕಾನಂದ ಗೌಡ ವಂದಿಸಿದರು.