ಬೆಳ್ತಂಗಡಿ: ತಾಲೂಕು ಸರಕಾರಿ ಸಮುದಾಯ ಆಸ್ಪತ್ರೆಗೆ ತಾಲೂಕು ಆರೋಗ್ಯ ರಕ್ಷಾ ಸಮಿತಿಯವರು ಭೇಟಿ ನೀಡಿದರು. ವಾರ್ಡ್ ಗಳಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ರಕ್ತ ಪರೀಕ್ಷಾ ಕೇಂದ್ರ, ಶವಾಗಾರ, ಡಯಾಲಿಸ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ವೈದ್ಯಾಧಿಕಾರಿ ಡಾ.ರಮೇಶ್ ರವರನ್ನು ಬೇಟಿ ಮಾಡಿ ತಾಲೂಕಿನಾಧ್ಯಂತ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ ಹತೋಟಿಗೆ ತರಲು ಮುಂಜಾಗೃತಾ ಕ್ರಮವಹಿಸುವಂತೆ ತಿಳಿಸಿದರು. ತಾಲೂಕಿನಲ್ಲಿ 19 ಡೆಂಗ್ಯೂ ಪ್ರಕರಣ ಪತ್ತೆಯಾಗಿದೆ ಎಂದು ತಿಳಿಸಿದರು. ರೋಗಿಗಳಿಗೆ ನೀಡಲು ಔಷದ ಕೊರತೆಯ ಬಗ್ಗೆ ಮಾಹಿತಿ ಕೇಳಿದಾಗ ಯಾವುದೇ ಕೊರತೆ ಇಲ್ಲ ಹೆಚ್ಚುವರಿಯಾಗಿ ತರಿಸಿದ್ದೇವೆ ಎಂದು ತಿಳಿಸಿದರು. ಇತ್ತೀಚೆಗೆ ಆಸ್ಪತ್ರೆಯಲ್ಲಿ ರೋಗಿಯೊಬ್ಬರನ್ನು ವೈದ್ಯರು ನಿರ್ಲಕ್ಷ್ಯ ವಹಿಸಿದ ಬಗ್ಗೆ ವಿವರಣೆ ಪಡೆದುಕೊಂಡರು.

ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಅಬ್ದುಲ್ ಕರೀಮ್, ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಸೆಬಾಸ್ಟಿಯನ್ ಪಿ.ಟಿ. ಕಳೆಂಜ, ನವೀನ್ ಗೌಡ ಸವಣಾಲು, ವೀರೇಂದ್ರ ಕುಮಾರ್ ಅಳದಂಗಡಿ, ರಶೀದ್ ಕಕ್ಕಿಂಜೆ, ವೆಂಕಣ್ಣ ಕೊಯ್ಯೂರು, ಸ್ಟೀವನ್ ಮೋನಿಸ್ ನಿಟ್ಟಡೆ, ಸವಿತಾ ಸುಲ್ಕೇರಿ ಹಾಗೂ ಯುವ ಕಾಂಗ್ರೆಸ್ ನ ವಿನಯ್ ಕುಮಾರ್ ಹಾಜರಿದ್ದರು.