ಪಿಲಿಗೂಡು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸಂಕ್ರಾಂತಿ ಪೂಜೆ

0

ಗೇರುಕಟ್ಟೆ: ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಪಿಲಿಗೂಡು ಕ್ಷೇತ್ರದಲ್ಲಿ ನಡೆಯುವ ಸಂಕ್ರಾಂತಿ ಪೂಜೆಯ ಪ್ರಯುಕ್ತ ಮಧ್ಯಾಹ್ನ ಬಂದಂತಹ ಭಕ್ತಾದಿಗಳೆಲ್ಲರಿಗೂ ತೀರ್ಥ ಪ್ರಸಾದ ಹಾಗೂ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿಯ ಮಕ್ಕಳೆಲ್ಲರಿಗೂ ಪುಸ್ತಕ, ಪೆನ್ನು, ಛತ್ರಿಯನ್ನು ಕ್ಷೇತ್ರದ ವತಿಯಿಂದ ನೀಡಲಾಯಿತು. ಮತ್ತು ಕ್ಷೇತ್ರಕ್ಕೆ ಆಗಮಿಸಿದ ಭಕ್ತರೆಲ್ಲರಿಗೂ ಅನ್ನದಾನದ ಸೇವೆಯನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಭಜನಾ ಮಂಡಳಿಯ ಗೌರವ ಅಧ್ಯಕ್ಷ ಪದ್ಮನಾಭ ಶಿಲ್ಪಿ ಮತ್ತು ಭಜನಾ ಮಂಡಳಿಯ ಮಕ್ಕಳು ಹಾಗೂ ಪೋಷಕರು ಹಾಗೂ ಕುಣಿತ ಬಜನಾ ತರಬೇತುದಾರರಾದ ನಾಗೇಶ್ ಬಿ. ನೆರಿಯ ಮತ್ತು ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here