ಬೆಳ್ತಂಗಡಿ: ತಾಲೂಕಿನ ಹೊಸಂಗಡಿ ಗ್ರಾಮ ಪಂಚಾಯತಿನಲ್ಲಿ, ಹರಿಪ್ರಸಾದ್ ಇವರ ಮರಣದಿಂದ ತೆರವಾಗಿದ್ದ,
ಮೂರನೇ ವಾರ್ಡ್ ಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ ಅಭ್ಯರ್ಥಿ ಆನಂದ ಬಂಗೇರ ಕೊಡಂಗೇರಿ ವಿಜೇತರಾಗಿದ್ದು, ಜೂ.9ರಂದು ಬೆಳ್ತಂಗಡಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಕಚೇರಿಯಲ್ಲಿ ಅಭಿನಂಧಿಸಿದರು.
ಬೆಳ್ತಂಗಡಿ ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ. ಪೆರಿಂಜೆ, ಕಾರ್ಯಕರ್ತ ದಿನೇಶ್ ಬೈಲು, ಸಂಗಮ್, ಚಂದ್ರು ಪೇರಿ, ಚಂದು ಉಪಸ್ಥಿತರಿದ್ದರು.