ಉಜಿರೆ: ಇಂಜಿನಿಯರಿಂಗ್‌ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ ಆಚರಣೆ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಅ.17ರಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.

ಮಾನವರಲ್ಲಿರಬೇಕಾದ ಆದರ್ಶ ಗುಣಗಳು, ಅನುಸರಿಸಬೇಕಾಗಿರುವ ನೀತಿ, ಭಾತೃತ್ವತೆ, ತ್ಯಾಗ, ರಾಜನೀತಿ, ಧರ್ಮಪಾಲನೆ ಮುಂತಾದ ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ರಾಮಾಯಣ ಎಂಬ ಮಹಾಕಾವ್ಯದ ಮೂಲಕ ಮನುಕುಲಕ್ಕೆ ಪರಿಚಯಿಸಿ, ಮಾರ್ಗದರ್ಶನ ನೀಡಿರುವ ಮಹರ್ಷಿಯವರು ಶ್ರೇಷ್ಠರೆನಿಸಿಕೊಂಡು ಸರ್ವರಿಂದಲೂ ಇಂದು ಪೂಜಿಸಲ್ಪಡುತ್ತಿದ್ದಾರೆ ಎಂದು ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ಈ ಸಂದರ್ಭದಲ್ಲಿ ನುಡಿದರು.

ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಆದಿ ಕವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

LEAVE A REPLY

Please enter your comment!
Please enter your name here