ಉಜಿರೆ: ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

0

ಉಜಿರೆ: ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅ.3ರಿಂದ 11ರವರೆಗೆ ನವರಾತ್ರಿ ಉತ್ಸವ ನಡೆಯಿತು. ಪ್ರತಿದಿನ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಭಕ್ತಾಧಿಗಳಿಗೆ ಫಲಹಾರ ವಿತರಿಸಲಾಯಿತು.

ನವರಾತ್ರಿಯ ಕೊನೆಯ ದಿನ ಮೊಕ್ತೇಸರರಾದ ವಾಸುದೇವ ಸಂಪಿಗೆತ್ತಾಯ ಮತ್ತು ವಾಣಿ ಸಂಪಿಗೆತ್ತಾಯ ಇವರಿಂದ ವಿಶೇಷ ಪೂಜೆ, ಕನ್ನಿಕ, ಸುಹಾಸಿನಿ ಪೂಜೆಯ ಬಳಿಕ ಮುತ್ತೈದೆಯರಿಗೆ ರವಿಕೆಕಣ ವಿತರಿಸಲಾಯಿತು.

ಅರ್ಚಕ ಕೃಷ್ಣ ಹೊಳ್ಳ, ಆಡಳಿತ ಮೊಕ್ತೇಸರ ವಾಸುದೇವ ಸಂಪಿಗೆತ್ತಾಯ, ಅಪ್ಪು ನಾಯರ್, ರವೀಂದ್ರ ಕಾರಂತ್, ರಾಘವೇಂದ್ರ ಹೊಳ್ಳ, ಆದರ್ಶ ಕಾರಂತ್, ಕೃಷ್ಣ ಪ್ರಸಾದ್, ಉಮಾಮಹೇಶ್ವರ ಭಜನಾ ಮಂಡಳಿಯ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here