ದೊಂಡೋಲೆ-ನಾರ್ಯ ರಸ್ತೆಯಲ್ಲಿ ಬಿದಿರು ಮುಳ್ಳು ,ಪೊದೆ ಕಡಿದು ಅಲ್ಲೇ ಬಿಟ್ಟ ಮೆಸ್ಕಾಂ ಸಿಬ್ಬಂದಿ-ಸುದ್ದಿ ವರದಿಯ ಬೆನ್ನಲ್ಲೇ ಫುಲ್ ಕ್ಲೀನ್-ಮೆಸ್ಕಾಂನವರಿಗೆ ಗ್ರಾಮಸ್ಥರ ಕೃತಜ್ಞತೆ

0

ಧರ್ಮಸ್ಥಳ: ಇಲ್ಲಿನ ದೊಂಡೋಲೆ ನಾರ್ಯ ರಸ್ತೆಯ ಉದ್ದಕ್ಕೂ ಮೆಸ್ಕಾಂನವರು ಪೊದೆ,ಬಿದಿರು ಮುಳ್ಳು ಕಡಿದು ರಸ್ತೆಯ ಬದಿಯಲ್ಲೇ ಬಿಟ್ಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದ ವರದಿಯನ್ನು ಸುದ್ದಿ ಬಿಡುಗಡೆ ವರದಿ ಮಾಡಿದ ಬೆನ್ನಲ್ಲೇ ಅದನ್ನು ತೆರವುಗೊಳಿಸಲಾಗಿದೆ.

ಈ ರಸ್ತೆಯಲ್ಲಿ ಪಾದಚಾರಿಗಳು ನಡೆದಾಡಲು ಹರಸಾಹಸ ಪಡುವ ಪರಿಸ್ಥಿತಿಯಿತ್ತು. ಈ ಬಗ್ಗೆ ಸುದ್ದಿ ಫೋಟೋ ಸಹಿತ ವರದಿ ಮಾಡಿದ್ದು,ಇದಕ್ಕೆ ಪಂಚಾಯತ್ ನವರು ಮತ್ತು ಮೆಸ್ಕಾಂ ಸ್ಪಂದಿಸಿದೆ. ಮೆಸ್ಕಾಂ ಇಲಾಖೆಯಿಂದ ಕಾರ್ಮಿಕರನ್ನು ಕಳುಹಿಸಿ ಅಕ್ಟೋಬರ್ 14ರಂದು ಮುಳ್ಳು,ಪೊದೆ ತೆರವುಗೊಳಿಸಿದೆ. ಇದಕ್ಕೆ ಗ್ರಾಮಸ್ಥರು ಮೆಸ್ಕಾಂಗೆ ಧನ್ಯವಾದ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here