ತಣ್ಣೀರುಪಂತ: ಕನಸು ಕಟ್ಟಡದಲ್ಲಿ ತಣ್ಣೀರುಪಂತ ಪ್ರಾ.ಕೃ.ಪ.ಸ. ಸಂಘದ ಕಚೇರಿ ಶುಭಾರಂಭ

0

ತಣ್ಣೀರುಪಂತ: ಕಲ್ಲೇರಿಯಲ್ಲಿ ನಿರ್ಮಾಣಗೊಂಡಿರುವ ತಣ್ಣೀರುಪಂತ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನೂತನ ಕನಸು ಕಟ್ಟಡಕ್ಕೆ ಸಹಕಾರಿ ಸಂಘದ ಕಚೇರಿ ಅ.11ರಂದು ಸ್ಥಳಾಂತರಗೊಂಡು ಉದ್ಘಾಟನೆಗೊಂಡಿದೆ.

ನೂತನ ಕಟ್ಟಡದಲ್ಲಿ ಸುಸಜ್ಜಿತ ವ್ಯವಸ್ಥೆಗಳನ್ನೊಳಗೊಂಡ ರೈತ ಸಭಾಭವನವಿದ್ದು, ಸಹಕಾರಿ ಸಂಘದ ಕಚೇರಿ ಶುಭಾರಂಭ ಪ್ರಯುಕ್ತ ಲಕ್ಷ್ಮೀ ಪೂಜೆ ನಡೆಯಿತು. ಕರಾಯ ವಿಠಲ ಆಚಾರ್ಯ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಸಹಕಾರಿ ಧುರೀಣ ನಿರಂಜನ್ ಬಾಂವತಬೆಟ್ಟು ಭಾವಚಿತ್ರವನ್ನು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ ಅನಾವರಣಗೊಳಿಸಿದರು. ಕುಶಾಲಪ್ಪ ಗೌಡ ಹಾಗೂ ಸಿಇಒ ಸುರೇಂದ್ರ ಕುಮಾರ್ ಅವರನ್ನು ಗೌರವಿಸಲಾಯಿತು.

ಸಂಘದ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ತಾಜುದ್ದೀನ್, ನಿರ್ದೇಶಕರಾದ ಪೂವಪ್ಪ ಬಂಗೇರ, ಜಯವಿಕ್ರಮ, ರೋಹಿತ್ ಶೆಟ್ಟಿ, ಲಿಂಗಪ್ಪ ನಾಯ್ಕ್, ಶ್ರೀಧರ ಗೌಡ, ಜಯಂತಿ ಪಾಲೇದು, ಓಬಯ್ಯ ಪೂಜಾರಿ, ಪುಷ್ಪಲತಾ, ಶೂರು ಹಾಗೂ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here