ಬೆಂಗಳೂರಿನ ವೃದ್ಧೆಯ ಶವ ಬೆಳಾಲು ಕೂಡಿಯಲ್ಲಿ ಪತ್ತೆ- ಶೌರ್ಯ ವಿಪತ್ತು ತಂಡದಿಂದ ಕಾರ್ಯಾಚರಣೆ

0

ಧರ್ಮಸ್ಥಳ: ವೃದ್ಧೆಯೋರ್ವರು ಸೆ.21ರಂದು ಕಾಣೆಯಾಗಿದ್ದು ಅವರ ಮೃತದೇಹ ಸೆ.30ರಂದು ಬೆಳಾಲಿನ ಕೂಡಿಗೆ ಎಂಬಲ್ಲಿ ನದಿಯಲ್ಲಿ ಪತ್ತೆಯಾಗಿದೆ.

ಶೌರ್ಯ ವಿಪತ್ತು ತಂಡದ ಸದಸ್ಯರು ಮೇಲೆತ್ತುವ ಕಾರ್ಯ ನಡೆಸಿದರು. ಮೊಬೈಲ್ ಹಾಗೂ ಊರುಗೋಲನ್ನು ಪೊಲೀಸ್‌ಸ್ಟೇಷನ್‌ ತಂದಿದ್ದರೂ, ಮೊಬೈಲ್ ಒದ್ದೆಯಾಗಿದ್ದರಿಂದ ಕೂಡಲೇ ಕುಟುಂಬಸ್ಥರನ್ನು ಸಂಪರ್ಕಿಸಲು ಅಸಾಧ್ಯವಾಗಿದ್ದು ನಂತರ ಪರಿಶೀಲಿಸಿ ಕುಟುಂಬದವರನ್ನು ಸಂಪರ್ಕಿಸಿದಾಗ ಬೆಂಗಳೂರು ರಾಜಾಜಿನಗರದ ರಾಜೇಶ್ವರಮ್ಮ (83ವ)ಎಂದು ತಿಳಿದು ಬಂದಿದ್ದು, ನಂತರ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ನೇತ್ರಾವತಿ ನದಿಯುದ್ದಕ್ಕೂ ಹುಡುಕಾಡಿದಾಗ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಮರದ ಗೆಲ್ಲಿಗೆ ಕಾಲುಸಿಕ್ಕಿಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಸೆ.30ರಂದು ಸಿಕ್ಕಿರುತ್ತದೆ.

ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here