ವಯನಾಡ್ ದುರಂತ: ಕಳೆಂಜದ ರಂಜಿತ್ ಪೂವತಿಂಗಲ್ ಮತ್ತು ತಂಡದಿಂದ ಸಹಾಯ ಹಸ್ತ

0

ಬೆಳ್ತಂಗಡಿ: ಆಗಸ್ಟ್ 25 ರಿಂದ 31ರವರೆಗೆ ಬೆಳ್ತಂಗಡಿ ಮತ್ತು ಕಡಬ ತಾಲೂಕಿನ ಯುವಕರ ತಂಡವು ಕೇರ್ ಹ್ಯಾಂಡ್ಸ್ ನ ಹೆಸರಿನಲ್ಲಿ ವಯನಾಡಿನ ಚುರಲ್ ಮಾಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಮಾಜ ಸೇವೆಯಲ್ಲಿ ಸತತವಾಗಿ ತೊಡಗಿಸಿ ಕಳೆಂಜದ ರಂಜಿತ್ ಪೂವತಿಂಗಲ್ ಮತ್ತು ತಂಡ ಶ್ಲಾಘನೀಯ ಸೇವೆಯನ್ನು ಸಲ್ಲಿಸಿತು.

ಅದೇ ರೀತಿ ಪೆಂಟೆಕೋಸ್ಟಲ್ ಕೇರ್ ಹ್ಯಾಂಡ್ಸ್ ಹೆಸರಿನಲ್ಲಿ ಸಮಾಜ ಸೇವೆಗಾಗಿ ಪಂಗಡವನ್ನು ಲೆಕ್ಕಿಸದೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದೆ. ಈ ಸೌತ್ ಕೆನರಾ ಪೆಂಟೆಕೋಸ್ಟಲ್ ಕೇರ್‌ಹ್ಯಾಂಡ್ಸ್ ವಯನಾಡಿನ ವಿವಿಧ ಪ್ರದೇಶಗಳಲ್ಲಿ ಸೆಪ್ಟೆಂಬರ್ 23 ರಿಂದ 25ರವರೆಗೆ ಕಾರ್ಯನಿರ್ವಹಿಸಲಿದೆ ಕೇರ್ ಹ್ಯಾಂಡ್ಸ್ ಎಂಬ ಸ್ವಯಂಸೇವಕ ಸಂಸ್ಥೆ ವಯನಾಡಿನಲ್ಲೂ ಕಾರ್ಯನಿರ್ವಹಿಸುತ್ತಿದೆ.

ವಯನಾಡ್‌ನ ಪುನರ್ವಸತಿ ಭಾಗವಾಗಿ, ಕರ್ನಾಟಕದ ಈ ಒಂದು ತಂಡ ವಯನಾಡಿನ ಚುರಲ್ ಮಲದಲ್ಲಿ ಒಂದು ವಾರದವರೆಗೆ ಮನೆಗಳನ್ನು ವಾಸಯೋಗ್ಯವಾಗಿಸಲು ಮತ್ತು ಆಹಾರ ಪದಾರ್ಥಗಳನ್ನು ವಿತರಿಸಲು ಸ್ವಯಂಸೇವಕ ಚಟುವಟಿಕೆಗಳನ್ನು ಮುನ್ನಡೆಸುತ್ತಿವೆ.

LEAVE A REPLY

Please enter your comment!
Please enter your name here