ಐದನೇ ಕರ್ನಾಟಕ ರಾಜ್ಯ ಹಣಕಾಸು ಆಯೋಗದೊಂದಿಗೆ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ನಿಯೋಗದ ಸಭೆ

0

ಬೆಳ್ತಂಗಡಿ: ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ನಿಯೋಗದೊಂದಿಗೆ ಖನಿಜ ಭವನ ಹಣಕಾಸು ಆಯೋಗದ ಸಭಾಂಗಣದಲ್ಲಿ ಸಭೆ ನಡೆಯಿತು. ಈಗಾಗಲೇ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘದಿಂದ ಗ್ರಾಮ ಪಂಚಾಯತಿ ನೌಕರರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಮತ್ತು ನಗರ ಪಂಚಾಯಿತಿ ನೌಕರರಂತೆ ವೇತನ ಶ್ರೇಣಿ ಸಿ ಮತ್ತು ಡಿ ದರ್ಜೆ ಸ್ಥಾನಮಾನವನ್ನು ನೀಡಬೇಕೆಂದು ಸರಕಾರದ ಮಟ್ಟದಲ್ಲಿ ಪ್ರಸ್ತಾಪ ಇರುವ ಕಾರಣ, ಈ ಬಗ್ಗೆ ಅನುದಾನವನ್ನು ಮೀಸಲಿರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಚರ್ಚಿಸಲಾಗಿದೆ.

ಯಾವ ಯಾವ ಮೂಲಗಳಿಂದ ಅನುದಾನಗಳನ್ನು ನಿಗದಿಪಡಿಸಬಹುವುದು ಎಂಬ ಬಗ್ಗೆ ಶ್ರೇಯೋಭಿವೃದ್ಧಿ ಸಂಘದ ನಿಯೋಗದೊಂದಿಗೆ ಮಹತ್ವವಾದ ಚರ್ಚೆಯನ್ನು ನಡೆಸಿದರು. ಹಣಕಾಸಿನ ಮೂಲದ ಬಗ್ಗೆ ಶ್ರೇಯೋಭಿವೃದ್ಧಿ ಸಂಘಟನೆಯಿಂದ ವಿವರವನ್ನು ಪಡೆಯಲಾಯಿತು. ಈ ಬಗ್ಗೆ ಸಂಘಟನೆಯಿಂದ ಪಂಚಾಯತ್ ರಾಜ್ ಇಲಾಖೆಯಲ್ಲಿ ವೇತನ ನಿಗದಿಪಡಿಸುವ ಬಗ್ಗೆ ಹಣದ ಮೂಲಗಳನ್ನು ವಿವರಿಸಿದರು. ರಾಜ್ಯದ ಗ್ರಾಮ ಪಂಚಾಯಿತಿ ನೌಕರರ ಹುದ್ದೆಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ನೌಕರರಿಗೆ ಉದ್ಯೋಗ ಭದ್ರತೆ ಹಾಗೂ ನೌಕರರ ಬದುಕನ್ನು ಬದಲಾವಣೆ ಮಾಡುವ ಬಗ್ಗೆ ರಾಜ್ಯ ಹಣಕಾಸು ಆಯೋಗ ಶಿಫಾರಸು ಮಾಡುವ ಮೂಲಕ ಕ್ರಮ ಕೈಗೊಂಡರೆ ಸಾಧ್ಯವಿದೆ ಎಂಬ ಮಾಹಿತಿಯ ವಿವರವನ್ನು ರಾಜ್ಯಾಧ್ಯಕ್ಷ ಡಾ.ದೇವಿ ಪ್ರಸಾದ್ ಬೊಲ್ಮ ಹಣಕಾಸು ಆಯೋಗದ ಮುಂದೆ ವಿವರಿಸಿದರು.

ಈ ಬಗ್ಗೆ ಐದನೇ ಹಣಕಾಸು ಆಯೋಗದ ಅಧ್ಯಕ್ಷ ನಾರಾಯಣ ಸ್ವಾಮಿ ಪರಿಶೀಲಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರಿಗೆ ವೇತನ ಶ್ರೇಣಿ ಹಾಗೂ ಸಿ ಮತ್ತು ಡಿ ದರ್ಜೆಯ ಸ್ಥಾನಮಾನವನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ಸರಕಾರಕ್ಕೆ ಆಯೋಗದಿಂದ ನಿರ್ದೇಶನವನ್ನು ನೀಡಲಾಗುವುದು ಎಂದು ತಿಳಿಸಿದರು. ಮಾಜಿ ಹಣಕಾಸು ಇಲಾಖೆಯ ಕಾರ್ಯದರ್ಶಿ ಐದನೇ ಹಣಕಾಸು ಆಯೋಗದ ಸದಸ್ಯ ಐಎಎಸ್ ಅಧಿಕಾರಿ ಆರ್ ಎಸ್ ಫೋಂಡೆ ಕಡತವನ್ನು ಪರಿಶೀಲಿಸಿ ನೌಕರರು ನೀಡಿರುವ ನ್ಯಾಯಯುತ ಬೇಡಿಕೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆಯೋಗದಿಂದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಂಚಾಯತ್ ರಾಜ್ ಮಾಜಿ ನಿರ್ದೇಶಕ ಯಾಲಕ್ಕಿ ಗೌಡ ಇವರಿಂದ ನೌಕರರ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಮಾಜಿ ನಿರ್ದೇಶಕರು, ಹಾಗೂ ಸಲಹೆಗಾರರಾದ ಕೆಂಪೇಗೌಡರವರು ಮಾತನಾಡಿ ಗ್ರಾಮ ಪಂಚಾಯಿತಿ ನೌಕರರು ಹಲವಾರು ವರ್ಷಗಳಿಂದ ಬೇಡಿಕೆ ನೀಡಿದ್ದು ಇವರ ಬೇಡಿಕೆ ನ್ಯಾಯಯುತವಾಗಿದ್ದು, ಇದಕ್ಕೆ ಪೂರಕವಾಗಿ ಇಲಾಖೆಯಿಂದ ಆದೇಶಗಳು ಕೂಡ ಆಗಿದ್ದು, ಆಯೋಗವ ಇದನ್ನು ಪರಿಶೀಲಿಸಿ ಮಂಡಿಸಬಹುದೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದ ನಿಯೋಗದಿಂದ ರಾಜ್ಯಾಧ್ಯಕ್ಷ ಡಾ.ದೇವಿ ಪ್ರಸಾದ್ ಬೊಲ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್ ಕುಲಾಲ್, ಉತ್ತರ ಕನ್ನಡ ಜಿಲ್ಲೆ ಜಿಲ್ಲಾಧ್ಯಕ್ಷ ಗಂಗಾಧರ ನಾಯಕ್, ಉಡುಪಿ ಜಿಲ್ಲೆ ಜಿಲ್ಲಾಧ್ಯಕ್ಷ ಪ್ರಶಾಂತ ತೆಂಕನಿಡಿಯೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧ್ಯಕ್ಷ ಸುದರ್ಶನ್, ಹಾವೇರಿ ಜಿಲ್ಲಾಧ್ಯಕ್ಷರಾದ ವಿಜಯಕುಮಾರ್ ಮಿಳ್ಳಿ, ಸತೀಶ್ ನಾರಾವಿ ಬೆಳ್ತಂಗಡಿ, ಸುರೇಶ ಅಳ್ಳಿ ಮೊರೆ ವಿಜಯಪುರ, ರಾಮಗೊಂಡ ನಡುವಿನಮನೆ ವಿಜಯಪುರ ಇಂಡಿ, ವೀರಪ್ಪ ಹಡಪದ ಧರ್ಮಸ್ಥಳ, ದಿನೇಶ್ ಮಾಗಡಿ, ಪ್ರಸನ್ನ ರಾಮನಗರ, ಪ್ರಸನ್ನಕುಮಾರ್ ಪಟ್ರಮೆ ದಕ್ಷಿಣ ಕನ್ನಡ, ಅರವಿಂದ ಕುಕ್ಕಿಹಳ್ಳಿ ಉಡುಪಿ, ಗುರು ಎಂ ನಾಯಕ್ ಸಿದ್ದಾಪುರ, ಸಂತೋಷ್ ನಾಯಕ್ ಕೋಲ್ ಶಿರಸಿ, ಚಂದ್ರಹಾಸ ನಾಯಕ್ ಇಟಗಿ, ವಸಂತ್ ನಾಯ್ಕ್ ಕ್ಯಾದಗಿ, ಯೋಗೇಶ ನಾಯಕ್ ಭಟ್ಕಳ, ವಿನಾಯಕ ಆಚಾರ್ಯ ಭಟ್ಕಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here