ಬೆಳಾಲು ಮಧ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯವರಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಭೇಟಿ

0

ಬೆಳಾಲು: ಉಜಿರೆ ವಲಯದ ಬೆಳಾಲು ಕಾರ್ಯಕ್ಷೇತ್ರದಲ್ಲಿ ಅ.4ರಿಂದ ನಡೆಯಲಿರುವ 1867ನೇ ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು, ಊರಿನ ಗಣ್ಯರು ಸೆ.22ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆರವರನ್ನು ಭೇಟಿ ಮಾಡಿ, ಮಧ್ಯವರ್ಜನ ಶಿಬಿರದ ಕಾರ್ಯಕ್ರಮಗಳ ಬಗ್ಗೆ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡರು ತಿಳಿಸಿ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಉಪಾಧ್ಯಕ್ಷ ನಾರಾಯಣಗೌಡ, ಪುಷ್ಪ ಆರ್. ಶೆಟ್ಟಿ, ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ, ಗೌರವ ಸಲಹೆಗಾರ ಪ್ರಶಾಂತ್ ಜೈನ್, ಕಾರ್ಯದರ್ಶಿ ತಾಲೂಕು ಯೋಜನಾಧಿಕಾರಿ ಸುರೇಂದ್ರ, ಜೊತೆ ಕಾರ್ಯದರ್ಶಿ ವನಿತಾ ನವೀನ್, ಕೋಶಾಧಿಕಾರಿ ಸತೀಶ್ ಗೌಡ ಎಳ್ಳುಗದ್ದೆ ಮತ್ತು ಸುಕೇಶ್ ಗೌಡ, ಬೆಳಾಲು ಒಕ್ಕೂಟದ ಅಧ್ಯಕ್ಷ ರತ್ನಾಕರ ಆಚಾರ್ಯ, ಗ್ರಾಮ ಸಮಿತಿಯ ಸ್ವಚ್ಛತಾ ಸೇನಾನಿ ಶ್ರೀಧರ ಪೂಜಾರಿ, ಗ್ರಾಮ ಸಮಿತಿಯ ಅಧ್ಯಕ್ಷ ಸೂರಪ್ಪ ಗೌಡ, ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಯೋಗೀಶ್ ಗೌಡ ಎಸ್., ನವಜೀವನ ಸಮಿತಿಯ ಸದಸ್ಯರಾದ ಜನಾರ್ಧನ ಪೂಜಾರಿ , ಚಿಂಕ್ರ ಗೌಡ, ಕಾಂತಪ್ಪ, ಬಿರ್ಮಣ ಪೂಜಾರಿ, ರಾಮಚಂದ್ರ,ಬಾಬು ಆಚಾರ್ಯ, ಸೇವಾ ಪ್ರತಿನಿಧಿಯವರಾದ ತಾರನಾಥ, ಪ್ರೇಮಲತಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here