ಮಿತ್ತಬಾಗಿಲು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ: ಶೇ.14 ಡಿವಿಡೆಂಡ್ ಘೋಷಣೆ

0

ಮಿತ್ತಬಾಗಿಲು: ಮಿತ್ತಬಾಗಿಲು ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಉಪಾಧ್ಯಕ್ಷ ನೇಮಿರಾಜರವರ ಅಧ್ಯಕ್ಷತೆಯಲ್ಲಿ ಸೆ.22ರಂದು ಸಂಘದ ವಠಾರದಲ್ಲಿ ನಡೆಯಿತು.

ಸಂಘದ ಕಾರ್ಯದರ್ಶಿ ಮೋನಪ್ಪ ಗೌಡ ಲೆಕ್ಕಪತ್ರ ಹಾಗೂ ವರದಿ ವಾಚಿಸಿದರು.ಆರ್ಥಿಕ ವರ್ಷದಲ್ಲಿ ಲಾಭದಲ್ಲಿ ಶೇ.14 ಡಿವಿಡೆಂಡ್ ಘೋಷಣೆ ಮಾಡಲಾಯಿತು.

ನಿರ್ದೇಶಕರುಗಳಾದ ವಿನಯಚಂದ್ರ, ಕೆ.ಸುಬ್ರಹ್ಮಣ್ಯ ಭಟ್, ಎಂ.ಸುರೇಶ್ ಪೂಜಾರಿ, ರವಿ ಸುವರ್ಣ, ಅನಿತಾ, ಶಶಿಕಲಾ, ಪಿ. ಆನಂದ ಗೌಡ, ಮಹೇಶ್ ಕೆ., ಕೇಶವ ಉಪಸ್ಥಿತರಿದ್ದರು.

ಚುನಾವಣೆಯ ನೀತಿ ಸಂಯುತೆಯಿಂದ ಅಧ್ಯಕ್ಷ ವಿನಯಚಂದ್ರ ಎಸ್. ಸಭಿಕರೊಂದಿಗೆ ಉಪಸ್ಥಿತರಿದ್ದರು.

ಸಿಬ್ಬಂದಿಗಳಾದ ಕುಸುಮ, ಶಾರದಾ, ಹರಿಣಾಕ್ಷಿ, ಭವ್ಯ ಸಹಕರಿಸಿದರು. ಮಲ್ಲಿಕಾ ಪ್ರಾರ್ಥಿಸಿದರು. ಸಭಾಧ್ಯಕ್ಷ ನೇಮಿರಾಜ ಸ್ವಾಗತಿಸಿ, ಕಾರ್ಯದರ್ಶಿ ಮೋನಪ್ಪ ಗೌಡ ವಂದಿಸಿದರು

LEAVE A REPLY

Please enter your comment!
Please enter your name here