ಅರಸಿನಮಕ್ಕಿ: ಅರಿಕೆಗುಡ್ಡೆ ವನದುರ್ಗ ದೇವಿ ಸನ್ನಿದಿಯಲ್ಲಿ ನವರಾತ್ರಿ ಪೂರ್ವಭಾವಿ ಸಭೆ

0

ಅರಿಕೆಗುಡ್ಡೆ: ಕೆಲವು ತಿಂಗಳುಗಳ ಹಿಂದಷ್ಟೇ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನೆರವೇರಿ ಇದೀಗ ನವರಾತ್ರಿ ಸಂಭ್ರಮಕ್ಕೆ ಅರಿಕೆಗುಡ್ಡೆ ಕ್ಷೇತ್ರ ಸಜ್ಜಾಗುತ್ತಿದೆ. ಇದರ ಪೂರ್ವ ಭಾವಿ ಸಭೆ ದೇವಳದ ಆವರಣದಲ್ಲಿ ಸೆ.20ರಂದು ದೇವಳದ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ ಅವರ ನೇತೃತ್ವದಲ್ಲಿ ನೆರವೇರಿ ಸಿದ್ಧತೆಗಳ ಬಗ್ಗೆ ಚರ್ಚೆ ನೆರವೇರಿತು.

ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ರಂಗ ದಾಮ್ಲೆ, ಅರ್ಚಕರಾದ ಉಲ್ಲಾಸ್ ಭಟ್, ಪದ್ಮಯ ಬಾರಿಗ, ಮುರಳಿಧರ್ ಶೆಟ್ಟಿಗಾರ್ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here