ಬೆಳ್ತಂಗಡಿ: ವಿಜಯ್ ಕನ್ಸಲ್ಟೆಂಟ್ ಶುಭಾರಂಭ

0

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಹಲವು ವರ್ಷದಿಂದ ಡಾಕ್ಯುಮೆಂಟೇಷನ್ ಕಛೇರಿ ನಡೆಸಿ ಕೊಂಡು ಬರುತ್ತಿದ್ದ ಬೆಳಾಲ್ ನ ಪ್ರವೀಣ್ ವಿಜಯ್ ಡಿ’ಸೋಜಾರ ನೂತನ ಕಛೇರಿ ಬೆಳ್ತಂಗಡಿಯ ವಿಘ್ನೇಶ್ ಸಿಟಿ ಬಿಲ್ಡಿಂಗ್ ನಲ್ಲಿ ಸೆ.16ರಂದು ಶುಭಾರಂಭಗೊಂಡಿತು.

ವಿಜಯ್ ಕನ್ಸಲ್ಟೆಂಟ್ ಅನ್ನುವ ಹೊಸ ಕಛೇರಿಯ ಉದ್ಘಾಟನೆಯನ್ನು ಮಾಲಕ ವಿಜಯ್ ಡಿ’ಸೋಜಾ ಅವರ ಮಕ್ಕಳಾದ ಪಿನ್ಸನ್, ಪ್ರಿವಾಲ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಉಜಿರೆ ಸಂತ ಅಂತೋನಿ ಚರ್ಚ್ ಧರ್ಮಗುರು ವ.ಫಾ.ಅಬೆಲ್ ಲೋಬೊ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವ.ಫಾ.ವಿಜಯ್ ಲೋಬೊ ಆಶೀರ್ವಚನ ಗೈದು ಶುಭ ಹಾರೈಸಿದರು.

ಉಜಿರೆ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಹಳ್ಳಿ ಮನೆ ಪ್ರವೀಣ್ ಫೆರ್ನಾಂಡಿಸ್, ಮಾಲಕರ ಪತ್ನಿ ಡೈನಾ ಡಿಸೋಜಾ, ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಅನಿಲ್ ಪ್ರಕಾಶ್ ಡಿ’ಸೋಜಾ, ಇಂಜಿನಿಯರ್ ಮುರಳೀಧರ್, ಗುತ್ತಿಗೆದಾರ ಮೆಲ್ವಿನ್ ಫೆರ್ನಾಂಡಿಸ್, ಉಜಿರೆ ಸಂತ ಅಂತೋನಿ ಚರ್ಚ್ ಬೆಳಾಲ್ ವಾಳೆಯ ಗುರಿಕಾರ ಮೆಲ್ವಿನ್ ಸಂತೋಷ್, ಅರುಣ್ ಡಿ’ಸೋಜಾ, ಲ್ಯಾನ್ಸಿ ಮೊನಿಸ್, ಸುನಿಲ್ ಡಿ’ಸೋಜಾ, ಜೊಸ್ಸಿ ಮೊರಾಸ್, ಸುನಿಲ್ ಮೊರಾಸ್, ಮಾರ್ಸೆಲ್ ಪಿಂಟೊ, ಸೆಲಿನ್ ಪಿಂಟೊ, ಮೆಲ್ವಿನ್ ಪಿಂಟೊ, ಜೆರಾಲ್ಡ್ ಡಿಸೋಜಾ, ಪ್ರಮೀಳಾ ಡಿಸೋಜಾ, ಅನಿಲ್ ಡಿ’ಸೋಜಾ ಮೊದಲಾದವರು ಉಪಸ್ಥಿತರಿದ್ದರು.

ಹೆರಾಲ್ಡ್ ಪಿಂಟೊ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here