ಉಜಿರೆ: ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಲಾಯಿಲ ದಯಾ ವಿಶೇಷ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ಲಾಯಿಲ: ಉಜಿರೆ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದ ಪ್ರಾಯೋಜಕತ್ವದಲ್ಲಿ ಲಾಯಿಲ ವಿಮುಕ್ತಿ ವಿಶೇಷ ದಯಾ ಶಾಲೆಯಲ್ಲಿ ಸೆ.5ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಉಜಿರೆ ಅನುಗ್ರಹ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಲೇರಿಯನ್ ರೊಡ್ರಿಗಸ್, ಉಪಾಧ್ಯಕ್ಷ ಅನಿಲ್ ಪ್ರಕಾಶ್ ಡಿ’ಸೋಜಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್, ನಿರ್ದೇಶಕರಾದ ಸುನಿಲ್ ಮೊರಾಸ್, ಗೀತಾ ಫೆಲ್ಸಿಯಾನ ಡಿ’ಸೋಜಾ, ಫೆಲಿಕ್ಸ್ ಡಿ’ಸೋಜಾ, ವಲೇರಿಯನ್ ಕ್ರಾಸ್ತಾ, ಮುಖ್ಯ ಅತಿಥಿಗಳಾಗಿ ಬದ್ಯಾರ್ ಸಂತ ರಫಾಯೆಲ್ ಚರ್ಚ್ ಧರ್ಮಗುರು ವ.ಫಾ.ರೋಶನ್ ಕ್ರಾಸ್ತಾ, ದಯಾ ಸ್ವ ಸಹಾಯ ಸಂಘದ ಮುಖ್ಯಸ್ಥೆ ಶಾಲಿನಿ, ವಿಮುಕ್ತಿ ಸಂಸ್ಥೆ ನಿರ್ದೇಶಕ ವ.ವಿನೋದ್ ಮಸ್ಕರೇನ್ಹಸ್, ದಯಾ ಶಾಲೆಯ ಮುಖ್ಯ ಶಿಕ್ಷಕಿ ದಿವ್ಯ ಉಪಸ್ಥಿತರಿದ್ದರು.

ಸಂಘದ ಸಿಬ್ಬಂದಿ ರಿಶೆಲ್ ಐವಿ ಮಿನೇಜಸ್ ದಯಾ ಶಾಲೆ ಶಿಕ್ಷಕರಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿದರು. ಸಹಕಾರಿ ಸಂಘದಿಂದ ದಯಾ ಶಾಲೆಗೆ ಆರ್ಥಿಕ ನೆರವು ವಿತರಿಸಲಾಯಿತು.ವಿಕಲ ಚೇತನ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

LEAVE A REPLY

Please enter your comment!
Please enter your name here