ಉಜಿರೆ: ಸಂತ ಅಂತೋನಿ ಚರ್ಚ್ ನ ಸ್ತ್ರೀ ಸಂಘಟನೆ ವತಿಯಿಂದ ಮಳೆಗಾಲದ ತಿಂಡಿ ತಿನಸು ಕಾರ್ಯಕ್ರಮ

0

ಉಜಿರೆ: ಉಜಿರೆ ಸಂತ ಅಂತೋನಿ ಚರ್ಚ್ ನ ಸ್ತ್ರೀ ಸಂಘಟನೆ ವತಿಯಿಂದ ಮಳೆಗಾಲದ ತಿಂಡಿ ತಿನಸು ಕಾರ್ಯಕ್ರಮವು ಆ.25ರಂದು ನಡೆಯಿತು.ಕಾರ್ಯಕ್ರಮವನ್ನು ಚರ್ಚ್ ಪ್ರಧಾನ ಧರ್ಮ ಗುರು ವ.ಫಾ.ಅಬೆಲ್ ಲೋಬೊ ಉದ್ಘಾಟಿಸಿದರು.

ಅನುಗ್ರಹ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ವ.ಫಾ.ವಿಜಯ್ ಲೋಬೊ, ಸಿಸ್ಟರ್ಸ್ ಒಫ್ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ನ ಸಿ. ನ್ಯಾನ್ಸಿ ಡಯಾಸ್, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಆಯೋಗದ ಸಂಚಾಲಕಿ ಲವೀನಾ ಫೆರ್ನಾಂಡಿಸ್, ಸ್ತ್ರೀ ಆಯೋಗದ ಸಂಚಾಲಕರಾದ ಜೆಸಿಂತಾ ತೌರೋ, ಮೆಲ್ವಿನ್ ಸಂತೋಷ್ ಉಪಸ್ಥಿತರಿದ್ದರು.

ಡಿಸೋಜಾ ಸ್ತ್ರೀ ಸಂಘಟನೆ ಅಧ್ಯಕ್ಷೆ ವಿನ್ನಿ ಡಿಸೋಜಾ ಸ್ವಾಗತಿಸಿ, ಕಾರ್ಯದರ್ಶಿ ವೀಣಾ ಫೆರ್ನಾಂಡಿಸ್ ವಂದಿಸಿ, ಸುಮಿತಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿ ಸದಸ್ಯರು ಹಾಗೂ ಕ್ರೈಸ್ತ ಬಾಂದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here