ರಾಜ್ಯ ಮಟ್ಟದ ಕರಾಟೆ ಪಂದ್ಯಾಟ- ಬೈಪಾಡಿಯ ಸುಮುಖ ಪಿ ಹೊಳ್ಳ ಹಾಗೂ ಸೃಷ್ಟಿ ಪಿ ಹೊಳ್ಳ ದ್ವಿತೀಯ ಸ್ಥಾನ

0

ಬೆಳ್ತಂಗಡಿ: ಆಗಸ್ಟ್ 17ರಂದು ಶೋರಿನ್ ರಿಯೋ ಅಸೋಸಿಯೇಷನ್ ಹಾಗೂ ಸ್ವಾಮಿ ಸ್ಟ್ರೆಂತ್ ಮೂಡಬಿದ್ರೆ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ 21ನೇ ರಾಜ್ಯ ಮಟ್ಟದ ಕರಾಟೆ ಪಂದ್ಯಾಟದಲ್ಲಿ 10 ವರ್ಷದ ವಯೋಮಾನದ ಗ್ರೀನ್ ಬೆಲ್ಟ್ ವಿಭಾಗದ ಕುಮಿತೆಯಲ್ಲಿ ಬೈಪಾಡಿಯ ಸುಮುಖ ಪಿ ಹೊಳ್ಳ ಹಾಗೂ 12 ವರ್ಷದ ವಯೋಮಾನದ ಗ್ರೀನ್ ಬೆಲ್ಟ್ ವಿಭಾಗದ ಕುಮಿತೆಯಲ್ಲಿ ಬೈಪಾಡಿಯ ಸೃಷ್ಟಿ ಪಿ ಹೊಳ್ಳ ಇವರು ದ್ವಿತೀಯ ಸ್ಥಾನ ಪಡೆದು ಬೆಳ್ಳಿಯ ಪದಕವನ್ನು ಪಡೆದುಕೊಂಡಿರುತ್ತಾರೆ.

ಇವರು ಬಂದಾರು ಗ್ರಾಮದ ಬೈಪಾಡಿಯ ಪ್ರಶಾಂತ್ ಹೊಳ್ಳ ಹಾಗೂ ಮೇಘನ ಪ್ರಶಾಂತ್ ಹೊಳ್ಳ ದಂಪತಿಯ ಮಕ್ಕಳಾಗಿದ್ದು, ಎಸ್.ಡಿ.ಎಂ ಇಂಗ್ಲಿಷ್ ಮೀಡಿಯಂ ಸ್ಕೂಲ್ (ಸಿಬಿಎಸ್ಇ) ಶಾಲೆ ಉಜಿರೆ ಇಲ್ಲಿಯ ವಿದ್ಯಾರ್ಥಿಗಳಾಗಿದ್ದು, ಸೆನ್ಸಾಯಿ ಮೋಹನ್ ಪೂಜಾರಿ ಬಜ ಕೊಯ್ಯೂರು ಇವರಿಂದ ಕರಾಟೆ ತರಬೇತಿಯನ್ನು ಪಡೆಯುತ್ತಿರುತ್ತಾರೆ.

LEAVE A REPLY

Please enter your comment!
Please enter your name here