ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜರ ಮನೆ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ಧ ಪ್ರತಿಭಟನೆ

0

ಬೆಳ್ತಂಗಡಿ: ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜ ಅವರ ಮನೆಯ ಮೇಲೆ ಆ.21ರಂದು ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ಧ ಬೆಳ್ತಂಗಡಿ ಮಿನಿ ವಿಧಾನ ಸೌಧ ಎದುರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಕಾರ್ಯಕರ್ತರು, ಕ್ರೈಸ್ತ ಸಂಘಟನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮಾನ್ಯ ಗ್ರಹ ಸಚಿವರಿಗೆ ಬೆಳ್ತಂಗಡಿ ತಹಶೀಲ್ದಾರರ ಮೂಲಕ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆ.22ರಂದು ಮನವಿ ಸಲ್ಲಿಸಿದರು.

ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಈ ಮೂಲಕ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (ಗ್ರಾಮೀಣ )ನಾಗೇಶ್ ಕುಮಾರ್ ಗೌಡ, ಪ್ರವೀಣ್ ಫೆರ್ನಾಂಡಿಸ್, ವಿನ್ಸೆಂಟ್ ಡಿ’ಸೋಜಾ, ಲಿಯೋ ರೊಡ್ರಿಗಸ್, ರಾಜ್ ಶೇಖರ್ ಶೆಟ್ಟಿ, ಅಶ್ರಫ್ ನೆರಿಯ, ಹಮೀದ್ ಉಜಿರೆ, ಜೆಸಿಂತ ಮೋನಿಸ್, ಪ್ರವೀಣ್ ಪಿಂಟೊ, ಅನಿಲ್ ಡಿಸೋಜಾ, ಸ್ಟ್ಯಾನಿ ಪಿಂಟೊ, ರಜತ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here