ಶಿಬರಾಜೆ: 23ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ಶಿಬರಾಜೆ: ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ, ಶಿಬರಾಜೆ ಪಾದೆ, ಇದರ ನೇತೃತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ಶಿಬರಾಜೆಇವರ ಸಹಕಾರದೊಂದಿಗೆ 23ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಶಿಬರಾಜೆ ಪಾದೆಯ ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಇದರ ಸಭಾಂಗಣದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಶ್ರೀ ಕೃಷ್ಣಾಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷರಾದ ಪಿ ಟಿ ಸಬಾಸ್ಟಿನ್, ನಿಡ್ಲೆ ಪ್ರಾ. ಕೃ ಪ ಸ ಸಂಘದ ನಿರ್ದೇಶಕರಾದ ನಿತ್ಯಾನಂದ ರೈ, ಜೆ ಸಿ ಐ ಅಧ್ಯಕ್ಷರಾದ ಸಂತೋಷ ಜೈನ್ ವಲಂಬಳ, ಕಳೆಂಜ ಸದಾ ಶಿವೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀಧರ್ ರಾವ್, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷರಾದ ಧನಂಜಯ ಗೌಡ ಜೆ ಸಿ ಐ ಕಾರ್ಯದರ್ಶಿ ಅಕ್ಷತ್ ರೈ, ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಕ್ರೀಡಾ ಸಮಿತಿಯ ಅಧ್ಯಕ್ಷರಾದ ಹರೀಶ್ ಗೌಡ, ಗ್ರಾಮಾಭ್ಯುದಯ ಕಾರ್ಯಕ್ರಮಅನುಷ್ಠಾನ ಸಮಿತಿಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here