ಭಾರಿ ಗಾಳಿ ಮಳೆಗೆ ಕರಂಬಾರು ಗ್ರಾಮದ ಜನತಾ ಕಾಲೋನಿಯಲ್ಲಿ ಮನೆಗಳಿಗೆ ಹಾನಿ

0

ಕರಂಬಾರು: ಜು.25ರಂದು ರಾತ್ರಿ ಬೀಸಿದ ಬಿರುಗಾಳಿಗೆ ಕರಂಬಾರು ಗ್ರಾಮದ ಜನತಾ ಕಾಲೋನಿ ನಿವಾಸಿ ಜುಭೇದ ಶಮೀರ್ ರವರ ಮನೆಯ ಮೇಲ್ಚಾವಣಿಯ ಹಾರಿಹೋಗಿದ್ದು ತುಂಬಾ ನಷ್ಟವಾಗಿರುತ್ತದೆ.

ಇದೇ ಕಾಲೋನಿಯ, ಜಿನ್ನು, ಮತ್ತು ಅಶ್ರಫ್ ರವರ ಮನೆಗಳಿಗೆ ಕೂಡ ಹಾನಿಯಾಗಿರುತ್ತದೆ.ಈ ಮಳೆ ಹಾನಿಯಾದ ವಿಚಾರವನ್ನು ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗಾರ ಗಮನಕ್ಕೆ ತಂದು ಮಳೆಯಿಂದ ಹಾನಿಯಾದ ಕುಟುಂಬಗಳಿಗೆ ಪರಿಹಾರ ನೀಡುವಂತೆ ಶಿರ್ಲಾಲು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪುಷ್ಪರಾಜ್ ಎಂ.ಕೆ ವಿನಂತಿಸಿಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here