ಸುದ್ದಿ ವರದಿ ಫಲಶೃತಿ: ಬಿಜೆಪಿ ಬೂತ್ ಸಮಿತಿ ವತಿಯಿಂದ ಬೆಳಾಲು-ಮಾಯ ರಸ್ತೆಯ ತಾತ್ಕಾಲಿಕ ದುರಸ್ಥಿ

0

ಬೆಳಾಲು: ಬೆಳಾಲಿನಿಂದ ಮಾಯ ನಾರ್ಯ ಮಾರ್ಗವಾಗಿ ಧರ್ಮಸ್ಥಳ ಸಂಪರ್ಕ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು ಬೆಳಾಲು ಮಾಯ ರಸ್ತೆಯಲ್ಲಿ ಪಾದಚಾರಿಗಳಿಗೆ, ಶಾಲಾ ಬಸ್ ಗಳು ಮತ್ತು ಸರಕಾರಿ ಬಸ್ ಸಂಚಾರಿಸದ ಸ್ಥಿತಿಯಲ್ಲಿ ರಸ್ತೆಯ ಬದಿಯಲ್ಲಿ ಪೊದೆಗಳು ಬೆಳೆದು ಶಾಲಾ ಮಕ್ಕಳಿಗೆ ನಡೆದುಕೊಂಡು ಹೋಗಲು ಕಷ್ಟಕರವಾಗಿತ್ತು.

ಇದನ್ನು ಗಮನಿಸಿದ ಭಾರತೀಯ ಜನತಾ ಪಾರ್ಟಿ 175 ಬೂತ್ ಸಮಿತಿ ವತಿಯಿಂದ ರಸ್ತೆಯ ಚರಂಡಿ ಮತ್ತು ಸಂಚಾರಕ್ಕೆ ತಾತ್ಕಾಲಿಕ ದುರಸ್ಥಿ ಮಾಡಿದರು.

ಬೆಳಾಲು ಗ್ರಾ.ಪಂ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್, 175 ಬೂತ್ ಸಮಿತಿ ಅಧ್ಯಕ್ಷ ಗಂಗಾಧರ್ ಸಾಲಿಯಾನ್, ಕಾರ್ಯದರ್ಶಿ ಬಾಲಕೃಷ್ಣ ಗೌಡ, ಪಂಚಾಯತ್ ಮಾಜಿ ಸದಸ್ಯ ಪೆರಣ ಗೌಡ ಪರಾರಿ, ಮಾಯ ಗುತ್ತು ಪುಷ್ಪದಂತ ಜೈನ್ ಮತ್ತು ಪಕ್ಷದ ಇತರ ಕಾರ್ಯಕರ್ತರು ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here